ಕಾಶ್ಮೀರ ಪಾಕಿಸ್ತಾನದ ಕುತ್ತಿಗೆ ನರ ಇದ್ದಂತೆ: ಇಮ್ರಾನ್‌ ಖಾನ್‌

Published : Sep 07, 2019, 11:46 AM IST
ಕಾಶ್ಮೀರ ಪಾಕಿಸ್ತಾನದ ಕುತ್ತಿಗೆ ನರ ಇದ್ದಂತೆ: ಇಮ್ರಾನ್‌ ಖಾನ್‌

ಸಾರಾಂಶ

ಕಾಶ್ಮೀರ ಪಾಕಿಸ್ತಾನದ ಕುತ್ತಿಗೆ ನರ ಇದ್ದಂತೆ: ಇಮ್ರಾನ್‌ ಖಾನ್‌| 1965ರ ಭಾರತ- ಪಾಕ್‌ ಯುದ್ಧದ ವರ್ಷಾಚರಣೆಯ ಅಂಗವಾಗಿ ರಕ್ಷಣೆ ಮತ್ತು ಹುತಾತ್ಮ ದಿನದ ಸಂದೇಶ

ಇಸ್ಲಾಮಾಬಾದ್‌[ಸೆ.07]: ಕಾಶ್ಮೀರದ ವಿಷಯವಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮೊಂಡುತನ ಮುಂದುವರಿಸಿದ್ದಾರೆ.

ಕಾಶ್ಮೀರವು ಪಾಕಿಸ್ತಾನದ ‘ಕುತ್ತಿಗೆಯ ನರ’ ಇದ್ದಂತೆ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಮಾಡಿದ್ದು ದೇಶದ ಭದ್ರತೆ ಮತ್ತು ಸಮಗ್ರತೆಗೆ ಸವಾಲಾಗಿದೆ ಎಂದು ಇಮ್ರಾನ್‌ ಖಾನ್‌ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಯುದ್ಧದ ಕನವರಿಕೆಯಿಂದ ಹೊರಬಂದ ಪಾಕ್ ಪ್ರಧಾನಿ: ನಾಲಿಗೆ ಮೇಲೆ ಶಾಂತಿಯ ಹೊಸ ಕಹಾನಿ!

1965ರ ಭಾರತ- ಪಾಕ್‌ ಯುದ್ಧದ ವರ್ಷಾಚರಣೆಯ ಅಂಗವಾಗಿ ರಕ್ಷಣೆ ಮತ್ತು ಹುತಾತ್ಮ ದಿನದ ಸಂದೇಶ ನೀಡಿದ ಇಮ್ರಾನ್‌ ಖಾನ್‌, ಕಾಶ್ಮೀರದ ವಿಷಯವಾಗಿ ತಮ್ಮ ಸರ್ಕಾರ ಜಾಗತಿಕ ವೇದಿಕೆಗಳಲ್ಲಿ ರಾಜತಾಂತ್ರಿಕ ಅಭಿಯಾನ ಆರಂಭಿಸಿದೆ. ಒಂದು ವೇಳೆ ಭಾರತದ ಅಣ್ವಸ್ತ್ರ ಶಸ್ತ್ರಾಗಾರದ ಬಗ್ಗೆ ಗಮನ ನೀಡದೇ ಇದ್ದರೆ, ಮುಂದಾಗುವ ದುರಂತಕ್ಕೆ ಅಂತಾರಾಷ್ಟ್ರೀಯ ಸಮುದಾಯವೇ ಹೊಣೆಯಾಗಲಿದೆ ಎಂದು ಇಮ್ರಾನ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ವಾರಕ್ಕೆ 16% ಏರಿಕೆ ಕಂಡ ಜಾಗತಿಕ ಕಚ್ಚಾತೈಲ ಬೆಲೆ, ಭಾರತ ಸೇರಿದಂತೆ ಇಡೀ ವಿಶ್ವಕ್ಕೆ ಹಣದುಬ್ಬರದ ಭೀತಿ!
ಕುತೂಹಲಕ್ಕೆ ಮಾಡಿಸಿದ DNA ಪರೀಕ್ಷೆ ಬದುಕಿಗೆ ತಂತು ಆಘಾತ.. ಇದು 38 ವರ್ಷಗಳ ಹಿಂದಿನ ಅದಲು-ಬದಲು ಕಥೆ