
ಬೆಂಗಳೂರು(ಎ.29): ಕರ್ನಾಟಕ ಅಂದರೆ ಹಾಗೆ ಯಾವುದಾದರೂ ಒಂದು ಸುದ್ದಿಯಿಂದ ವಿಶ್ವದ ಗಮನಸೆಳೆಯುವುದರಲ್ಲಿ ಎತ್ತಿದ ಕೈ. ಈ ಬಾರಿ ಕರ್ನಾಟಕ ಹಾಗೆ ದೇಶದಲ್ಲೇ ಫೇಮಸ್ ಆಗಿದ್ದಕ್ಕೆ ಕಾರಣ ಏನು ಎನ್ನುವುದನ್ನು ಕೇಳಿದರೆ ಬೆಚ್ಚಿ ಬೀಳ್ತೀರ. ಕರ್ನಾಟಕಕ್ಕೆ ದೇಶದಲ್ಲೇ ಪ್ರಥಮ ಸ್ಥಾನ ಸಿಕ್ಕಿದ್ದು ಯಾವುದ್ರಲ್ಲಿ ಗೊತ್ತಾ ಇಲ್ಲಿದೆ ನೋಡಿ ಉತ್ತರ.
ಸರ್ಕಾರಿ ಅಧಿಕಾರಗಳಿಗೆ ಕಾಸಿಲ್ಲ ಅಂದರೆ ಕಣ್ಣೇ ಕಾಣಲ್ಲ ಎನ್ನುವ ಮಾತಿತ್ತು. ಆದರೆ ಕರ್ನಾಟಕ ಆ ಮಾತನ್ನು ಸಾಭೀತು ಮಾಡಿದೆ. ಹೌದು ಈ ಸುದ್ದಿ ಕರ್ನಾಟಕದ ಪಾಲಿಗೆ ಕಹಿ ಅನಿಸಿದರು ಅಕ್ಷರ ಸಹ ಸಾಬೀತು ಮಾಡಿದ್ದು ದೆಹಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಡೆಸಿರುವ ಸಮೀಕ್ಷೆ. ದೇಶದ 20 ರಾಜ್ಯಗಳ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಈ ಸತ್ಯ ಬಹಿರಂಗವಾಗಿದೆ.
-ಕರ್ನಾಟಕ - ಶೇ 77 - ನಂ - 1ಸ್ಥಾನ
-ಆಂಧ್ರಪ್ರದೇಶ - ಶೇ 74 - ನಂ - 2ಸ್ಥಾನ
-ತಮಿಳುನಾಡು - ಶೇ 68 - ನಂ - 3ಸ್ಥಾನ
-ಮಹಾರಾಷ್ಟ್ರ - ಶೇ 57 - ನಂ - 4ಸ್ಥಾನ
-ಜಮ್ಮು-ಕಾಶ್ಮೀರ - ಶೇ 44 - ನಂ - 5ಸ್ಥಾನ
-ಪಂಜಾಬ್ - ಶೇ 42 - ನಂ - 6ಸ್ಥಾನ
2016ರಲ್ಲಿ ಒಡಿಶಾ ಶೇ 68ರಷ್ಟು ಲಂಚ ಪಡಯುವ ರಾಜ್ಯವಾಗಿ ಪ್ರಥಮ ಸ್ಥಾನದಲ್ಲಿ ಇತ್ತು. ಕರ್ನಾಟಕ ಎರಡನೇ ಸ್ಥಾನ ಪಡೆದಿತ್ತು. ಆದ್ರೆ ಈ ಬಾರಿ ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಪಡೆರುವುದು ದುರಂತದ ಸಂಗತಿ.
-ಭೂ ದಾಖಲೆ ಇಲಾಖೆ - ಪ್ರಥಮ ಸ್ಥಾನ
-ವಸತಿ ಹಾಗೂ ಪೊಲೀಸ್ ಇಲಾಖೆ - ಎರಡನೇ ಸ್ಥಾನ
-ಶಾಲಾ ಪ್ರವೇಶ ವಿಭಾಗ - ಮೂರನೇ ಸ್ಥಾನದಲ್ಲಿದೆ
ಒಟ್ಟಿನಲ್ಲಿ ರಾಜ್ಯಕ್ಕೆ ಇಂಥದೊಂದು ವಿಚಾರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಸಿಗುತ್ತೆ ಅಂದ್ರೆ ಇದಕ್ಕಿಂತ ದುರಾದೃಷ್ಟಕರ ಸುದ್ದಿ ಬೇರೊಂದಿಲ್ಲ ಕಾಣುತ್ತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.