ಜಿಎಸ್'ಟಿ ಎಫೆಕ್ಟ್: ಕನ್ನಡ ಸಿನಿಮಾ ದುಬಾರಿ, ಪರಭಾಷೆ ಚಿತ್ರ ಸೋವಿ!

Published : May 20, 2017, 04:47 PM ISTUpdated : Apr 11, 2018, 01:03 PM IST
ಜಿಎಸ್'ಟಿ ಎಫೆಕ್ಟ್: ಕನ್ನಡ ಸಿನಿಮಾ ದುಬಾರಿ, ಪರಭಾಷೆ ಚಿತ್ರ ಸೋವಿ!

ಸಾರಾಂಶ

ಹಳೆ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಕನ್ನಡ ಸಿನಿಮಾಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ನೀಡಿ ಪರಭಾಷಾ ಸಿನಿಮಾಗಳಿಗೆ ಶೇ.30ರಷ್ಟುತೆರಿಗೆ ವಿಧಿಸುತ್ತಿತ್ತು. ಕನ್ನಡ ಪ್ರೇಕ್ಷಕರು ಕೇಂದ್ರ ಸರ್ಕಾರದ ಸೇವಾ ತೆರಿಗೆ ಶೇ.15 ಮತ್ತು ಅದಕ್ಕೆ ಸೆಸ್‌ಗಳು ಸೇರಿ ಶೇ.17ರಷ್ಟುಮಾತ್ರ ಪಾವತಿಸುತ್ತಿದ್ದರು. ಜಿಎಸ್‌ಟಿ ಜಾರಿಯಿಂದ ಎಲ್ಲಾ ಭಾಷಾ ಸಿನಿಮಾಗಳಿಗೂ ಏಕರೂಪದ ತೆರಿಗೆ ಅನ್ವಯಿಸಲಿದೆ. ಆದ್ದರಿಂದ ಸಹಜವಾಗಿಯೇ ಕನ್ನಡ ಸಿನಿಮಾಗಳ ಟಿಕೆಟ್‌ ದರ ಹೆಚ್ಚಳವಾಗಲಿದೆ ಮತ್ತು ಪರಭಾಷಾ ಸಿನಿಮಾಗಳ ಟಿಕೆಟ್‌ ದರ ಕಡಿಮೆಯಾಗಲಿದೆ.

ಬೆಂಗಳೂರು(ಮೇ 20): ಜು.1ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗುತ್ತಿರುವ ಪರಿಣಾಮ ಪರಭಾಷಾ ಸಿನಿಮಾಗಳಿಗಿಂತ ಕನ್ನಡ ಸಿನಿಮಾಗಳಿಗೆ ಹೆಚ್ಚು ಪರಿಣಾಮ ಬೀರಲಿದೆ. ಕನ್ನಡ ಸಿನಿಮಾಗಳ ಟಿಕೆಟ್‌ ದರ ಈಗಿರುವುದಕ್ಕಿಂತ ದುಬಾರಿಯಾಗಲಿದೆ. ದೇಶದ ಎಲ್ಲಾ ಪ್ರಾದೇಶಿಕ ಸಿನಿಮಾಗಳ ಮೇಲೆ ಶೇ.28ರಷ್ಟುತೆರಿಗೆ ವಿಧಿಸುತ್ತಿರುವುದರಿಂದ ಕನ್ನಡ ಸಿನಿಮಾಗಳ ದರ ಕೂಡ ಜಾಸ್ತಿಯಾಗಲಿದೆ.

ಒಟ್ಟಾರೆ ಸಿನಿಮಾ ಟಿಕೆಟ್‌ ದರದ ಮೇಲೆ ಏಕರೂಪದ ಶೇ.28ರಷ್ಟುತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ, ಈಗಿರುವ ದರಕ್ಕಿಂತ ಕನ್ನಡ ಸಿನಿಮಾಗಳಿಗೆ ಶೇ.10ರಿಂದ 11ರಷ್ಟುತೆರಿಗೆ ಹೆಚ್ಚಳವಾಗಲಿದೆ. ಅದೇ ಕನ್ನಡೇತರ ಸಿನಿಮಾಗಳಿಗೆ ಕನ್ನಡ ಸಿನಿಮಾಗಳಿಗಿಂತ ಶೇ.3ರಿಂದ 5ರಷ್ಟುಟಿಕೆಟ್‌ ದರ ಕಡಿತವಾಗಲಿದೆ.

ಹೇಗೆ ಹೆಚ್ಚಳವಾಗಲಿದೆ?: ಹಳೆ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಕನ್ನಡ ಸಿನಿಮಾಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ನೀಡಿ ಪರಭಾಷಾ ಸಿನಿಮಾಗಳಿಗೆ ಶೇ.30ರಷ್ಟುತೆರಿಗೆ ವಿಧಿಸುತ್ತಿತ್ತು. ಕನ್ನಡ ಪ್ರೇಕ್ಷಕರು ಕೇಂದ್ರ ಸರ್ಕಾರದ ಸೇವಾ ತೆರಿಗೆ ಶೇ.15 ಮತ್ತು ಅದಕ್ಕೆ ಸೆಸ್‌ಗಳು ಸೇರಿ ಶೇ.17ರಷ್ಟುಮಾತ್ರ ಪಾವತಿಸುತ್ತಿದ್ದರು. ಜಿಎಸ್‌ಟಿ ಜಾರಿಯಿಂದ ಎಲ್ಲಾ ಭಾಷಾ ಸಿನಿಮಾಗಳಿಗೂ ಏಕರೂಪದ ತೆರಿಗೆ ಅನ್ವಯಿಸಲಿದೆ. ಆದ್ದರಿಂದ ಸಹಜವಾಗಿಯೇ ಕನ್ನಡ ಸಿನಿಮಾಗಳ ಟಿಕೆಟ್‌ ದರ ಹೆಚ್ಚಳವಾಗಲಿದೆ ಮತ್ತು ಪರಭಾಷಾ ಸಿನಿಮಾಗಳ ಟಿಕೆಟ್‌ ದರ ಕಡಿಮೆಯಾಗಲಿದೆ.

ಪರಿಹಾರವೇನು?: ರಾಜ್ಯ ಸರ್ಕಾರ ಅಥವಾ ಚಲನಚಿತ್ರ ವಾಣಿಜ್ಯ ಮಂಡಳಿಯು ಜಿಎಸ್‌ಟಿ ಕೌನ್ಸಿಲ್‌ಗೆ ಈ ಬಗ್ಗೆ ಮರು ಮನವಿ ಸಲ್ಲಿಸಬೇಕು ಅಥವಾ ರಾಜ್ಯ ಸರ್ಕಾರಗಳು ಸಬ್ಸಿಡಿ ರೂಪದಲ್ಲಿ ಟಿಕೆಟ್‌ ದರದ ಮೇಲೆ ವಿನಾಯಿತಿ ನೀಡಿದರೆ ಮಾತ್ರ ಕನ್ನಡ ಸಿನಿಮಾಗಳ ಟಿಕೆಟ್‌ ದರ ಕಡಿಮೆಯಾಗಲಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೆಹಲಿ ಭೇಟಿಯ ಗುಟ್ಟು ಬಿಚ್ಚಿಟ್ಟ ಡಿಸಿಎಂ ಡಿಕೆ ಶಿವಕುಮಾರ್, ಕಾಲವೇ ಉತ್ತರ ನೀಡಲಿದೆ ಎಂದ್ರು!
ರಾಮಚಂದ್ರನ ಕಾಮಪ್ರಸಂಗ: ಇದು 'AI' ಸೃಷ್ಟಿಯೋ ಅಥವಾ ಹಳೇ ವಿಡಿಯೋವೋ?