
ಬೆಂಗಳೂರು[ನ.24] ಕರ್ನಾಟಕದ ಮಟ್ಟಿಗೆ ಕರಾಳ ಶನಿವಾರ. ಬಸ್ ದುರಂತದಲ್ಲಿ 30 ಜನರನ್ನು ಕಳೆದುಕೊಂಡ ರಾಜ್ಯ ಅದೇ ದಿನ ರಾತ್ರಿಯ ವೇಳೆಗೆ ಕನ್ನಡ ಚಿತ್ರರಂಗದ ಹಿರಿಯಣ್ಣನನ್ನು ಕಳೆದುಕೊಂಡಿದೆ. ರೆಬಲ್ ಸ್ಟಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಟಿಕೆಟ್ ಪಡೆದುಕಿಂಡಿರಲಿಲ್ಲ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಷ್ಟೂ ಅಭ್ಯರ್ಥಿಗಳ ಪಟ್ಟಿ ಬಿಡಗುಡೆ ಮಾಡಿದ್ದರೂ ಅಂಬರೀಶ್ ಸ್ಥಾನಕ್ಕೆ ಅಂದರೆ ಮಂಡ್ಯಕ್ಕೆ ಯಾರನ್ನು ಘೋಷಣೆ ಮಾಡಿರಲಿಲ್ಲ. ಅಂದರೆ ಅಂಬರೀಶ್ ತಾಕತ್ತು ನಿಮಗೆ ಗೊತ್ತಾಗುತ್ತದೆ. ನಂತರ ಅಂಬರೀಶ್ ಸ್ಪರ್ಧಿಸುವ ಮನಸ್ಸು ಮಾಡಿರಲಿಲ್ಲ.
ಕಾಲಿಗೆ ಬಿದ್ದಿದ್ದ ಶಿವರಾಮೇಗೌಡ: ಮಂಡ್ಯ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜಯಗಳಿಸಿದ್ದ ಜೆಡಿಎಸ್ ನ ಶಿವರಾಮೆಗೌಡ ಅಂಬರೀಶ್ ಕಾಳಿಗೆ ಬಿದ್ದಿದ್ದರು.
ವಸತಿ ಸಚಿವ ಸ್ಥಾನದಿಂದ ಗೇಟ್ ಪಾಸ್: ಸಿದ್ದರಾಮಯ್ಯ ಸರಕಾರದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಅವರನ್ನು ಕಾರಣವಿಲ್ಲದೇ ಕೈ ಬಿಡಲಾಗಿತ್ತು. ಇಲ್ಲಿಂದಲೇ ಅಂಬರೀಶ್ ರಾಜಕಾರಣದಿಂದ ದೂರವಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.