ರಾಜ್ಯದಲ್ಲಿ ಹೆಚ್ಚಾಯ್ತು ಕಂಬಳ ಕಿಚ್ಚು; ನಾಳೆಯ ತೀರ್ಪಿನ ಮೇಲೆ ಎಲ್ಲರ ಕಣ್ಣು

Published : Jan 23, 2017, 10:06 AM ISTUpdated : Apr 11, 2018, 12:45 PM IST
ರಾಜ್ಯದಲ್ಲಿ ಹೆಚ್ಚಾಯ್ತು ಕಂಬಳ ಕಿಚ್ಚು; ನಾಳೆಯ ತೀರ್ಪಿನ ಮೇಲೆ ಎಲ್ಲರ ಕಣ್ಣು

ಸಾರಾಂಶ

ಜನವರಿ 24ರಂದು ಕಂಬಳ ಕುರಿತು ಕೋರ್ಟ್​ ತೀರ್ಪು ಹೊರ ಬೀಳಲಿದೆ. ಅಂದು ತೀರ್ಪು ಪರವಾಗಿ ಬಂದರೆ ಶನಿವಾರ ಕೋಟಿ ಚಿನ್ನಯ ಜೋಡುಕೆರೆ ಕಂಬಳ ನಡೆಸಿ ಸಂಭ್ರಮಾಚರಣೆ ಮಾಡಲಾಗುವುದು. ತೀರ್ಪು ವಿರುದ್ಧವಾಗಿ ಬಂದರೆ ಕೋಣಗಳನ್ನು ಕೆರೆಗೆ ಇಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಮಂಗಳೂರು (ಜ.23): ಜಲ್ಲಿಕಟ್ಟಿಗೆ ಕೇಂದ್ರದ ಅನುಮತಿ ಸಿಕ್ಕಿರುವ ಬೆನ್ನಲ್ಲೆ ಕರ್ನಾಟಕದಲ್ಲಿ ಕಂಬಳದ ಕಿಚ್ಚು ಹೊತ್ತಿಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಕಂಬಳ ಪರ ಅಭಿಯಾನ ಈಗ ಪ್ರತಿಭಟನಾ ಹಂತಕ್ಕೆ ತಲುಪಿದೆ. ಮುಂದಿನ ಶನಿವಾರ ದೊಡ್ಡ ಮಟ್ಟದ ಹೋರಾಟಕ್ಕೂ ವೇದಿಕೆ ಸಜ್ಜಾಗಿದೆ.

ದಕ್ಷಿಣ ಕನ್ನಡದ ಮೂಡಬಿದಿರೆಯಲ್ಲಿ ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂದು ಮಹತ್ವದ ತೀರ್ಮಾನ ಕೈಗೊಳ್ಳಲಾಯ್ತು.

ಜನವರಿ 24ರಂದು ಕಂಬಳ ಕುರಿತು ಕೋರ್ಟ್​ ತೀರ್ಪು ಹೊರ ಬೀಳಲಿದೆ. ಅಂದು ತೀರ್ಪು ಪರವಾಗಿ ಬಂದರೆ ಶನಿವಾರ ಕೋಟಿ ಚಿನ್ನಯ ಜೋಡುಕೆರೆ ಕಂಬಳ ನಡೆಸಿ ಸಂಭ್ರಮಾಚರಣೆ ಮಾಡಲಾಗುವುದು. ತೀರ್ಪು ವಿರುದ್ಧವಾಗಿ ಬಂದರೆ ಕೋಣಗಳನ್ನು ಕೆರೆಗೆ ಇಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಶನಿವಾರದ ಹೋರಾಟದಲ್ಲಿ 250 ಕೋಣ, 25 ಸಾವಿರ ಪ್ರತಿಭಟನಾಕಾರರು ಸೇರುವ ನಿರೀಕ್ಷೆಯಿದೆ. ಇನ್ನೂ ಸರ್ಕಾರ ಕೂಡ ಹೈಕೋರ್ಟಿನ ತೀರ್ಪಿಗೆ ಕಾಯುತ್ತಿದೆ. ಅಗತ್ಯ ಬಿದ್ದರೆ ಸಂಪುಟ ಸಭೆ ಸೇರಿ ಸುಗ್ರೀವಾಜ್ಞೆಗೆ ಪ್ರಸ್ತಾವನೆ ಕಳಿಸುತ್ತೇವೆ ಎಂದು ಸರ್ಕಾರಿ ಮುಖ್ಯ ಸಚೇತಕ ಐವಾನ್ ಡಿಸೋಜ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿವನ ಗೆಟಪ್ಪಿನಲ್ಲಿ ಬಂದ ಶಿವರಾಜ್‌ಕುಮಾರ್; ಥಿಯೇಟರ್‌ನಲ್ಲಿ '45' ಶಿವಣ್ಣನಿಗೆ ಪೂಜೆ ಮಾಡಿದ ಫ್ಯಾನ್ಸ್!
ಡೇಂಜರ್ ಡಿಸೆಂಬರ್: ಅಡಿಕೆ ತೋಟದಲ್ಲಿ ವಿದ್ಯುತ್ ಶಾಕ್, ಕೂಲಿ ಕಾರ್ಮಿಕ ಬಲಿ! ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದೌಡು