
ಚೆನ್ನೈ(ಜ.18): ತಮಿಳುನಾಡಿನ ಜನರಿಗೆ ಪರ್ಯಾಯ ರಾಜಕೀಯ ಆಯ್ಕೆ ನೀಡುವ ಸಲುವಾಗಿ ಹೊಸ ಪಕ್ಷ ಕಟ್ಟುವುದಾಗಿ ಈಗಾಗಲೇ ಘೋಷಿಸಿರುವ ಪ್ರಸಿದ್ಧ ಚಿತ್ರನಟ ಕಮಲ್ ಹಾಸನ್, ತಮ್ಮ ಪಕ್ಷದ ಹೆಸರನ್ನು ಫೆ.21 ರಂದು ಘೋಷಣೆ ಮಾಡಲಿದ್ದಾರೆ.
ತಮಿಳುನಾಡಿನ ತಮ್ಮ ತವರು ಜಿಲ್ಲೆ ರಾಮನಾಥಪುರದಲ್ಲಿ ಪಕ್ಷದ ಹೆಸರು ಘೋಷಣೆ ಮಾಡಲಿರುವ ಕಮಲ್ ಅವರು, ಅಂದೇ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಕಮಲ್ ಅವರ ಈ ಪ್ರವಾಸ ಹಂತಗಳಲ್ಲಿ ನಡೆಯಲಿದೆ.
ರಾಮನಾಥಪುರದಿಂದ ಆರಂಭವಾಗಿ ಮದುರೈ, ದಿಂಡಿಗಲ್ ಹಾಗೂ ಶಿವಗಂಗೆ ತಲುಪಲಿದೆ. ತನ್ಮೂಲಕ ಕಮಲ್ ಹಾಸನ್ ಅವರು ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಂತೆ ಆಗುತ್ತದೆ. ಕೆಲವು ಸಮಯದಿಂದ ತಮಿಳುನಾಡಿನ ರಾಜಕಾರಣವನ್ನು ಯಥಾಸ್ಥಿತಿ ಕಾಡುತ್ತಿದೆ. ಅದಕ್ಕೆ ಸವಾಲು ಒಡ್ಡುವ ಉದ್ದೇಶ ತಮ್ಮದಾಗಿದೆ ಎಂದು ಕಮಲ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.