
ಕಲಬುರಗಿ(ಮೇ.17): ಕಲಬುರಗಿ ಜಿಲ್ಲೆ 9 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಚುನಾವಾಣೆ ಒಂದು ವರ್ಷ ಇರುವಾಗಲೇ ಕಲಬುರಗಿಯಲ್ಲಿ ಎಲೆಕ್ಷನ್ ಕಾವು ತೀವ್ರಗೊಂಡಿದೆ. ರಾಜಕೀಯ ಪಕ್ಷಗಳ ಮುಖಂಡರಲ್ಲಿ ಟಿಕೇಟ್ಗಾಗಿ ಲಾಭಿ, ಪೈಪೋಟಿ ಬಲು ಜೋರಾಗಿಯೇ ಕಂಡು ಬರುತ್ತಿದೆ. ವರಿಷ್ಠರು ತಮ್ಮನ್ನು ಗುರುತಿಸಲಿ ಎಂದು ಟಿಕೇಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಸುತ್ತಾಡಿ ಜನರ ಮತ್ತು ಪಕ್ಷದ ನಾಯಕರ ಗಮನ ಸೆಳೆಯುವ ಯತ್ನ ನಡೆಸುತ್ತಿದ್ದಾರೆ.
ಇನ್ನು ಕಲಬುರಗಿಯಲ್ಲಿ ಈ ಬಾರಿಯ ಚುನಾವಣೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಮತ್ತಷ್ಟು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಹಿಂದೆ ಕಲಬುರಗಿಯ ರಾಜಕಾರಣದಲ್ಲಿ ಸಕ್ರೀಯರಾಗಿದ್ದ ಮಾಜಿ ಸಿಎಂ ಧರ್ಮಸಿಂಗ್ ಈ ಬಾರಿ ಅನಾರೋಗ್ಯದಿಂದ ಬಳಲುತ್ತಿದ್ದು ಇದರ ಕಾರ್ಯತಂತ್ರದ ಪೂರ್ಣ ಹೊಣೆಗಾರಿಕೆ ಖರ್ಗೆ ಮೇಲಿರಲಿದೆ. ಖರ್ಗೆ ಅವರಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಮುಖಗಳು ಬಿಜೆಪಿಯಲ್ಲಿ ಇಲ್ಲದಿದ್ರೂ ಯಡಿಯೂರಪ್ಪ ಪ್ರಭಾವವೇ ಇಲ್ಲಿ ಬಿಜೆಪಿಗೆ ಬಂಡವಾಳ.
ಒಟ್ಟಿನಲ್ಲಿ ಈಗಾಗಲೇ ಬಿಸಿಲೂರಿನಲ್ಲಿ ಚುನಾವಣೆಯ ಬಿಸಿ ಶುರುವಾಗಿದ್ದು, ಆಕಾಂಕ್ಷಿಗಳು ಟಿಕೆಟ್ಗಾಗಿ ಲಾಭಿ ಶುರು ಮಾಡಿಕೊಂಡಿದ್ದಾರೆ. ಯಾವ ಪಕ್ಷದಲ್ಲಿ ಯಾವ್ಯಾವ ನಾಯಕರಿಗೆ ಸಿಗುತ್ತದೋ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.