ತರಿಕೆರೆ ಬಳಿಯ ಅರಣ್ಯದಲ್ಲಿ ಕಡವೆ ಬೇಟೆ, ಇನ್ಪೋಸಿಸ್ ಉದ್ಯೋಗಿ ಸೇರಿ 11 ಮಂದಿ ಅರೆಸ್ಟ್

Published : Jan 01, 2017, 11:51 PM ISTUpdated : Apr 11, 2018, 01:03 PM IST
ತರಿಕೆರೆ ಬಳಿಯ ಅರಣ್ಯದಲ್ಲಿ ಕಡವೆ ಬೇಟೆ, ಇನ್ಪೋಸಿಸ್ ಉದ್ಯೋಗಿ ಸೇರಿ 11 ಮಂದಿ ಅರೆಸ್ಟ್

ಸಾರಾಂಶ

ಬಂಧಿತರಲ್ಲಿ ಇನ್ಪೋಸಿಸ್ ಉದ್ಯೋಗಿ ಮೀರ್ನಾಯಿರ್ ಅಲಿ, ಪಿಯು ವಿದ್ಯಾರ್ಥಿ ಮೀರ್ ನಜೀರ್, ರಿಯಲ್ ಎಸ್ಟೆಟ್ ಉದ್ಯಮಿ ಶಾರ್ಪ್ ಶೂಟರ್ ರಪಿಕ್ ತಲೆಮರೆಸಿಕೊಂಡಿದ್ದು, ಬಂಧಿತರಿಂದ ೨ ವಾಹನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಉಲ್ಲಾಸ್, ಉಪ ಅರಣ್ಯವಲಯಾಧಿಕಾರಿ ಸೂರಪ್ಪ ಇತರರು ಪಾಲ್ಗೊಂಡಿದ್ದರು.

ಚಿಕ್ಕಮಗಳೂರು(ಜ.02): ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾಡಿಗೆ ಅತಿಕ್ರಮ ಪ್ರವೇಶ ಮಾಡಿ ಎರಡು ಕಡವೆಗಳನ್ನ ಬೇಟೆಯಾಡಿದ ಆರೋಪದ ಮೇಲೆ ಓರ್ವ ಶಾರ್ಪ್ ಶೂಟರ್ ಸೇರಿದಂತೆ ೧೧ ಜನರನ್ನ ಬಂಧಿಸಲಾಗಿದೆ. ತರೀಕೆರೆ ತಾಲೂಕು ತಣಿಗೆಬೈಲು ಅರಣ್ಯ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಕೆಮ್ಮಣ್ಣಗುಂಡಿ ರಾಜ್ಮಹಲ್ ಮರ್ಗದ ನೆತ್ತಿಚೌಕದ ಬಳಿ ಶನಿವಾರ ರಾತ್ರಿ ೨ ಕಡವೆಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಧ್ಯರಾತ್ರಿ ಬೇಟೆಯಾಡಿದ ಮಾಹಿತಿಯನ್ನು ಸ್ಥಳೀಯರು ಅರಣ್ಯ ಇಲಾಖೆಗೆ ತಲುಪಿಸಿದ್ದಾರೆ.ತಕ್ಷಣ ಕಾರ್ಯಪ್ರೌವೃತ್ತರಾದ ಅರಣ್ಯ ಸಿಬ್ಬಂದಿ ಕೆಮ್ಮಣ್ಣಗುಂಡಿ ಅರಣ್ಯ ತನಿಖಾ ಠಾಣೆ ಬಳಿ ಕಾದು ಕುಳಿತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಲ್ಲಿ ಇನ್ಪೋಸಿಸ್ ಉದ್ಯೋಗಿ ಮೀರ್ನಾಯಿರ್ ಅಲಿ, ಪಿಯು ವಿದ್ಯಾರ್ಥಿ ಮೀರ್ ನಜೀರ್, ರಿಯಲ್ ಎಸ್ಟೆಟ್ ಉದ್ಯಮಿ ಶಾರ್ಪ್ ಶೂಟರ್ ರಪಿಕ್ ತಲೆಮರೆಸಿಕೊಂಡಿದ್ದು, ಬಂಧಿತರಿಂದ ೨ ವಾಹನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಉಲ್ಲಾಸ್, ಉಪ ಅರಣ್ಯವಲಯಾಧಿಕಾರಿ ಸೂರಪ್ಪ ಇತರರು ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆರೆಬ್ರಲ್ ಪಾಲ್ಸಿ ನರದ ಸಮಸ್ಯೆ ಇದ್ದರೂ ಎಲ್ಲವನ್ನು ಮೆಟ್ಟಿನಿಂತು ಮೊದಲ ಪ್ರಯತ್ನದಲ್ಲೇ UPSC ಪಾಸಾದ ಮನ್ವೇಂದ್ರ!
ಹನಿಮೂನ್‌ ಮೊಟಕುಗೊಳಿಸಿ ನವವಿವಾಹಿತೆ ನೇಣಿಗೆ ಶರಣು, ಪೊಲೀಸರು ಬರದಂತೆ ಗೇಟ್‌ ಗೆ ನಾಯಿ ಕಟ್ಟಿ ಲಾಕ್ ಮಾಡಿಕೊಂಡ ಆರೋಪಿಗಳು!