
ನವದೆಹಲಿ (ಮೇ.12): ನ್ಯಾಯಾಂಗ ನಿಂದನೆ ಆರೋಪದಲ್ಲಿ 6 ತಿಂಗಳು ಜೈಲುಶಿಕ್ಷೆಗೆ ಗುರಿಯಾಗಿರುವ ಕಲ್ಕತ್ತಾ ನ್ಯಾ. ಸಿ.ಎಸ್ ಕರ್ಣನ್ ಬೇಷರತ್ ಕ್ಷಮೆಯಾಚಿಸಲು ಸಿದ್ಧರಿದ್ದಾರೆ. ಆದರೆ ಕೋರ್ಟ್ ನೊಂದಣಾಧಿಕಾರಿ ಅವರ ಅರ್ಜಿಯನ್ನು ಸ್ವೀಕರಿಸಲಿಲ್ಲವೆಂದು ಅವರ ಪರ ವಕೀಲ ಸುಪ್ರೀಂಕೋರ್ಟ್’ಗೆ ಹೇಳಿದ್ದಾರೆ.
ನ್ಯಾಯಾಂಗ ನಿಂದನೆ ಆರೋಪದಲ್ಲಿ ನ್ಯಾ. ಕರ್ಣನ್ ಗೆ ವಿಧಿಸಿರುವ 6 ತಿಂಗಳು ಜೈಲುಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಅವರ ಪರ ವಕೀಲರು ಸುಪ್ರೀಂಕೋರ್ಟ್’ಗೆ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಸಿದ ನ್ಯಾಯಾಲಯ ನೀವು ಅರ್ಜಿಯನ್ನು ಸಲ್ಲಿಸಿ. ನ್ಯಾಯಾಧೀಶರು ಲಭ್ಯವಿದ್ದಾಗ ವಿಚಾರಣೆ ನಡೆಸುತ್ತೇವೆ ಎಂದಿದೆ.
7 ನ್ಯಾಯಾಧೀಶರ ಪೀಠವು ಮೇ. 09 ರಂದು ನ್ಯಾ. ಕರ್ಣನ್ ಗೆ ಜೈಲುಶಿಕ್ಷೆ ವಿಧಿಸಿದ್ದು,ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪ.ಬಂಗಾಳ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. ಇದೇ ಮೊದಲ ಬಾರಿಗೆ ಹಾಲಿ ನ್ಯಾಯಾಧೀಶರೊಬ್ಬರಿಗೆ ಜೈಲುಶಿಕ್ಷೆ ವಿಧಿಸಲಾಗಿದೆ. ಸದ್ಯಕ್ಕೆ ಕರ್ಣನ್ ದೇಶಬಿಟ್ಟು ಪಲಾಗೈದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.