ಜು.1 ರಿಂದ ಜಿಎಸ್'ಟಿ ಜಾರಿ; ತುಟ್ಟಿಯಾಗಲಿದೆಯೇ ಚಿನ್ನಾಭರಣ?

Published : Jun 21, 2017, 05:43 PM ISTUpdated : Apr 11, 2018, 12:48 PM IST
ಜು.1 ರಿಂದ ಜಿಎಸ್'ಟಿ ಜಾರಿ; ತುಟ್ಟಿಯಾಗಲಿದೆಯೇ ಚಿನ್ನಾಭರಣ?

ಸಾರಾಂಶ

ಕೇಂದ್ರ ಸರ್ಕಾರದ ಬಹುನಿರೀಕ್ಷಿತ  ಜಿಎಸ್​ಟಿ ಜು.1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ರಾಷ್ಟ್ರಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಆದರೆ  ಚಿನ್ನದ ಬೆಲೆ ಏರಿಕೆಯಾಗಲಿದೆ. ಎಷ್ಟು ತೆರಿಗೆ ಜಾಸ್ತಿಯಾಗಲಿದೆ  ಅನ್ನೋ ಡೀಟೆಲ್ಸ್ ಇಲ್ಲಿದೆ ನೋಡಿ.

ಬೆಂಗಳೂರು (ಜೂ.21): ಕೇಂದ್ರ ಸರ್ಕಾರದ ಬಹುನಿರೀಕ್ಷಿತ  ಜಿಎಸ್​ಟಿ ಜು.1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ರಾಷ್ಟ್ರಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಆದರೆ  ಚಿನ್ನದ ಬೆಲೆ ಏರಿಕೆಯಾಗಲಿದೆ. ಎಷ್ಟು ತೆರಿಗೆ ಜಾಸ್ತಿಯಾಗಲಿದೆ  ಅನ್ನೋ ಡೀಟೆಲ್ಸ್ ಇಲ್ಲಿದೆ ನೋಡಿ.

ಜುಲೈ 1 ರಿಂದ ಚಿನ್ನಾಭರಣ ತುಟ್ಟಿ

ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗೋದು ಖಾತ್ರಿಯಾಗಿದೆ. ಅದರ ಬೆನ್ನಲ್ಲೆ ಚಿನ್ನಾಭರಣ ದರ ಕೂಡ ಗಗನಕ್ಕೇರಲಿದೆ. ಸದ್ಯ, ಚಿನ್ನಕ್ಕೆ ಶೇ.2 ರಷ್ಟು ತೆರಿಗೆ ಇದ್ದು, ಇದೀಗ ಜಿಎಸ್‌ಟಿಯಲ್ಲಿ ಶೇ. 3 ರಷ್ಟು ತೆರಿಗೆ ದರ ನಿಗದಿ ಮಾಡಲಾಗಿದೆ. ಅಂದರೆ ಹಾಲಿ ಇರುವ ದರಕ್ಕಿಂತ ಶೇ.1 ರಷ್ಟು ಹೆಚ್ಚು. ಇದರಿಂದ ಸಹಜವಾಗಿಯೇ ಬೆಲೆಯಲ್ಲಿ ಏರಿಕೆ ಕಾಣಲಿದೆ. ಪ್ರತಿ ಗ್ರಾಂಗೆ ಅಂದಾಜು 30 ರಿಂದ 70ರವರೆಗೂ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ ಅಂತಾರೆ ಜ್ಯುವೆಲ್ಲರಿ ಮಾಲಿಕರು.

ಜಿಎಸ್‌ಟಿ ಹೆಚ್ಚಳದಿಂದ ಬೆಲೆ ಏರಿಕೆ ಆಗಿದೆ ಎನ್ನುವುದು ಗ್ರಾಹಕರಿಗೆ ತಕ್ಷಣಕ್ಕೆ ಮನವರಿಕೆ ಆಗುವುದಿಲ್ಲ. ಹೀಗಾಗಿ  ಕನಿಷ್ಠ ಮೂರು ತಿಂಗಳವರೆಗೆ ಚಿನ್ನಾಭರಣ ಖರೀದಿ ಮಂದಗತಿಯಲ್ಲಿ ಸಾಗಲಿದೆ. ಅಲ್ಲದೆ ವರ್ತಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಹಕರಿಗಂತೂ ಹೊರೆಯಾಗೊದು ಖಂಡಿತ ಅಂತಾರೆ ಆರ್ಥಿಕ ತಜ್ಙ.

ಇನ್ನು ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವ ವರ್ತಕರಿಗೆ ನೆರವಾಗಲು ಅಧಿಗಂ ಎಂಬ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದರ ಬೆಲೆ 5 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಈ ತಂತ್ರಾಂಶದ ಮೂಲಕ ಎಲ್ಲಾ ಮಾಹಿತಿ ಲಭ್ಯವಾಗಲಿದೆ. ಒಟ್ಟಿನಲ್ಲಿ   ಚಿನ್ನಾಭರಣದ ದರ ಏರಿಕೆಯಾದ್ರೆ, ಇನ್ನುಳಿದ ಪದಾರ್ಥಗಳ ದರ ಕುಸಿಯಲಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ
ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ: ಕುತೂಹಲ!