ಅಸ್ವಸ್ಥಗೊಂಡು ಮಂಚದ ಮೇಲೆ ಕುಸಿದು ಬಿದ್ದ ಜೆಡಿಎಸ್ ಶಾಸಕ

Published : Sep 20, 2018, 07:23 PM ISTUpdated : Sep 21, 2018, 03:16 PM IST
ಅಸ್ವಸ್ಥಗೊಂಡು ಮಂಚದ ಮೇಲೆ ಕುಸಿದು ಬಿದ್ದ ಜೆಡಿಎಸ್ ಶಾಸಕ

ಸಾರಾಂಶ

ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ದೂರುಗಳು ಕೇಳಿ ಬಂದ ಹಿನ್ನೆಲೆ ಹಾಗೂ ಮಂಗಳವಾರ ರಾತ್ರಿ ನಡೆದ ಘಟನೆಯಿಂದ ಬುಧವಾರ ಬೆಳ್ಳಂಬೆಳಗ್ಗೆ ಶಾಸಕ ಕೆ. ಮಹದೇವ್ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ ಮಂಗಳವಾರ ರಾತ್ರಿ ಕರ್ತವ್ಯ ದಲ್ಲಿದ್ದ ವೈದ್ಯಾಧಿಕಾರಿ ಡಾ. ವೀಣಾಸಿಂಗ್ ರಿಂದ ಮಾಹಿತಿ ಪಡೆದರು.

ಪಿರಿಯಾಪಟ್ಟಣ[ಸೆ.20]: ಶಾಸಕ ಕೆ. ಮಹದೇವ್ ಅವರು ಮಂಗಳವಾರ ರಾತ್ರಿ ಮನೆಯಲ್ಲಿ ತೀವ್ರ ಆಯಾಸಗೊಂಡು ಮಂಚದ ಮೇಲೆ ಕುಸಿದು ಬಿದ್ದು ವೈದ್ಯರ ಚಿಕಿತ್ಸೆ ನಂತರ ಚೇತರಿಸಿಕೊಂಡ ಘಟನೆ ಜರುಗಿದೆ.

ಕಳೆದೆರಡು ದಿನಗಳಿಂದ ಕುಟುಂಬ ಸಮೇತ ಧರ್ಮಸ್ಥಳ ಪ್ರವಾಸ ಕೈಗೊಂಡು ಮಂಗಳವಾರ ಸಂಜೆ ಪಟ್ಟಣದ ನಿವಾಸಕ್ಕೆ ಆಗಮಿಸಿದ ಸಂದರ್ಭ ಮನೆಯ ಬಳಿ ತಮ್ಮ ಕುಂದು ಕೊರತೆಗಳ ಮನವಿ ನೀಡಲು ಬಂದಿದ್ದ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಜನಸಂದಣಿ ಹೆಚ್ಚಿದ್ದರಿಂದ ತಾಪಂ ಬಳಿಯ ಕಚೇರಿಗೆ ತೆರಳಿ ರಾತ್ರಿ 9.30ರವರೆಗೂ ಮನವಿಗಳನ್ನು ಸ್ವೀಕರಿಸಿ, ಕಾರ್ಯಕರ್ತರ ಕುಶಲೋಪರಿ ವಿಚಾರಿಸಿ ಮನೆಗೆ ಆಗಮಿಸಿದ ಸಂದರ್ಭ ಆಯಾಸದಿಂದ ಬಳಲಿದ್ದ ಶಾಸಕರು ಮಂಚದ ಮೇಲೆ ಕುಸಿದು ಬಿದ್ದರು.

ಇದರಿಂದ ಕುಟುಂಬದವರು ಆತಂಕಗೊಂಡು ಗಾಬರಿಯಲ್ಲಿದ್ದಾಗ ತಕ್ಷಣ ಶಾಸಕರ ಕಾರು ಚಾಲಕ ಸನಿಹದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿಗಳಿಗೆ ವಿಷಯ ತಿಳಿಸಿ ಚಿಕಿತ್ಸೆ ನೀಡುವಂತೆ ಕೋರಿದಾಗ ಆ ಸಮಯ ಕರ್ತವ್ಯದಲ್ಲಿದ್ದ ಡಾ. ವೀಣಾಸಿಂಗ್ ಆಗಮಿಸದ ಕಾರಣ ರಾತ್ರಿ 10.30ರ ಸಮಯ ಪಟ್ಟಣದ ಖಾಸಗಿ ಕ್ಲಿನಿಕ್‌ನ ವೈದ್ಯರೊಬ್ಬರು ಶಾಸಕರ ಮನೆಗೆ ಆಗಮಿಸಿ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡಿದ್ದಾರೆ.

ದಿಢೀರ್ ಭೇಟಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ದೂರುಗಳು ಕೇಳಿ ಬಂದ ಹಿನ್ನೆಲೆ ಹಾಗೂ ಮಂಗಳವಾರ ರಾತ್ರಿ ನಡೆದ ಘಟನೆಯಿಂದ ಬುಧವಾರ ಬೆಳ್ಳಂಬೆಳಗ್ಗೆ ಶಾಸಕ ಕೆ. ಮಹದೇವ್ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ ಮಂಗಳವಾರ ರಾತ್ರಿ ಕರ್ತವ್ಯ ದಲ್ಲಿದ್ದ ವೈದ್ಯಾಧಿಕಾರಿ ಡಾ. ವೀಣಾಸಿಂಗ್ ರಿಂದ ಮಾಹಿತಿ ಪಡೆದರು. ಹಲವರು ಶಾಸಕರಿಗೆ ಆಸ್ಪತ್ರೆಯ ಆಡಳಿತ ಅವ್ಯವಸ್ಥೆಯ ಬಗ್ಗೆ ದೂರು ನೀಡಿ ಸಾರ್ವಜನಿಕರಿಗೆ ಉತ್ತಮ ಸೇವೆ ದೊರಕಿಸಿಕೊಡುವಂತೆ ದೂರಿದರು.

ತಬ್ಬಿಬ್ಬಾದ ವೈದ್ಯೆ: ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದ್ದರಿಂದ ವಿಚಲಿತಗೊಂಡ ವೈದ್ಯೆ ಡಾ. ವೀಣಾಸಿಂಗ್ ಆ ಸಂದರ್ಭದಲ್ಲಿ ಅಪಘಾತ ಹಾಗೂ ಹೆರಿಗೆ ಸಂಬಂಧಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಉತ್ತರಿಸಿದಾಗ ಸ್ಥಳದಲ್ಲಿದ್ದವರು ರೋಗಿಗಳನ್ನು ವಿಚಾರಿಸಿದಾಗ ವೈದ್ಯರು ಸುಳ್ಳು ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.

ಶಾಸಕ ಕೆ. ಮಹದೇವ್ ಮಾತನಾಡಿ, ನನಗೆ ಅನಾರೋಗ್ಯ ಸಂಬಂಧ ಚಿಕಿತ್ಸೆಗೆ ಧಾವಿಸಲಿಲ್ಲ ಎಂದು ಆಸ್ಪತ್ರೆಗೆ ಭೇಟಿ ನೀಡಿಲ್ಲ, ತಾಲೂಕಿನ ಜನಸಾಮಾನ್ಯರಿಂದ ದೂರುಗಳು ಬಂದ ಹಿನ್ನೆಲೆ ವಿಷಯದ ಸತ್ಯ ಸತ್ಯತೆ ತಿಳಿಯಲು ಭೇಟಿ ನೀಡಿದ್ದೇನೆ, ಈ ಹಿಂದೆಯೂ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸಿಬ್ಬಂದಿ ಕಾರ್ಯವೈಖರಿಯ ಅಸಮಾಧಾನಗೊಂಡು ಉತ್ತಮ ಸೇವೆ ನೀಡುವಂತೆ ಎಚ್ಚರಿಸಿದ್ದರು ಬದಲಾಗದಿರುವ ಬಗ್ಗೆ ಆಕ್ರೋಶವಿದೆ.ಸಾರ್ವಜನಿಕರ ಉಪಯೋಗಕ್ಕಾಗಿ ಸರ್ಕಾರ ಸಾವಿರಾರು ಕೋಟಿ ಹಣ ವ್ಯಯ ಮಾಡಿ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸಿದ್ದರು ವೈದ್ಯರ ನಿರ್ಲಕ್ಷ್ಯದಿಂದ ಉತ್ತಮ ಸೇವೆ ದೊರೆಯದೆ ಇರುವುದು ವಿಷಾದಕರ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡಿ ಎಂದು ತಿಳಿವಳಿಕೆ ನೀಡಿದರು.

ಅನಾರೋಗ್ಯದ ನಡುವೆಯು ನಿಗದಿತ ಕಾರ್ಯಕ್ರಮದಲ್ಲಿ ಭಾಗಿ: ಬುಧವಾರದ ಶಾಸಕರ ಕಾರ್ಯಕ್ರಮ ಮುಂಚಿತವಾಗಿಯೇ ನಿಗದಿಯಾದ್ದರಿಂದ ಕಾರ್ಯಕ್ರಮ ರದ್ದು ಮಾಡಬಾರದೆಂದು ಬೆಳಿಗ್ಗೆಯಿಂದ ಸಂಜೆಯವರೆಗೂ ತಾಲೂಕಿನ ಜವನಿಕುಪ್ಪೆ ಗ್ರಾಮದಲ್ಲಿ ಈಶ್ವರ ದೇವಸ್ಥಾನ ಕಟ್ಟಡ ಪೂಜೆ, ಕಂಪಲಾಪುರ ಹಾಗೂ ಕಗ್ಗುಂಡಿ ತಂಬಾಕು ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆಗೆ ಚಾಲನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ತಾಲೂಕು ಆಡಳಿತ ವತಿಯಿಂದ ವಿಶ್ವಕರ್ಮ ಜಯಂತಿ, ಈಡಿಗ ಸಮುದಾಯ ಹಾಗೂ ಹಂದಿಜೋಗಿ ಕಾಲೋನಿ ನಿವಾಸಿಗಳಿಂದ ಸನ್ಮಾನ ಸ್ವೀಕಾರ ಹಾಗೂ ಪಿಎಸಿಸಿಎಸ್‌ಗಳ ಕಾರ್ಯದರ್ಶಿಗಳ ಸಭೆಯಲ್ಲಿ ಪಾಲ್ಗೊಂಡರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್