17 ವರ್ಷದ ನಂತರ ಅಮ್ಮನನ್ನು ಭೇಟಿಯಾದ ಸಾಕು ಮಗ: ಅಮ್ಮ ಮಗನನ್ನು ಮಗನಲ್ಲ ಅಂದಿದ್ದು ಏಕೆ ಗೊತ್ತೆ

Published : Oct 06, 2016, 03:29 PM ISTUpdated : Apr 11, 2018, 01:12 PM IST
17 ವರ್ಷದ ನಂತರ ಅಮ್ಮನನ್ನು ಭೇಟಿಯಾದ ಸಾಕು ಮಗ: ಅಮ್ಮ ಮಗನನ್ನು ಮಗನಲ್ಲ ಅಂದಿದ್ದು ಏಕೆ ಗೊತ್ತೆ

ಸಾರಾಂಶ

ಚೆನ್ನೈ(ಅ.6): ತೀರಾ ಅನಾರೋಗ್ಯದ ಕಾರಣದಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರನ್ನು ಸಾಕು ಮಗ ಸುಧಾಕರನ್ 17 ವರ್ಷದ ನಂತರ ಭೇಟಿಯಾಗಿದ್ದಾರೆ. 1994ರಲ್ಲಿ ಮದುವೆಯಾಗಿ ಕೆಲ ವರ್ಷಗಳಲ್ಲಿ ಜಯಲಲಿತಾ ಅವರಿಂದ ಬೇರೆಯಾಗಿದ್ದರೂ ಸಾಕು ಮಗ. ಈತ ಜಯಲಲಿತಾ ಆಪ್ತೆ ಶಶಿಕಲಾಳ ಸಂಬಂಧಿ ಕೂಡ ಹೌದು. ಈವರೆಗೂ ಎಲ್ಲಿದ್ದ ಎಂಬುದರ ಬಗ್ಗೆ ಮಾಹಿತಿ ತಿಳಿದಿರಲಿಲ್ಲ. ಇಂದು ಅಮ್ಮನ ಭೇಟಿಗೆ ಆಗಮಿಸಿದ್ದಾರೆ.

ಸುಧಾಕರನ್ ಮದುವೆಯಾಗಿರುವುದು ತಮಿಳಿನ ಮೇರು ನಟ ಶಿವಾಜಿ ಗಣೇಶನ್ ಅವರ ಮೊಮ್ಮಗಳು ಸತ್ಯವತಿಯನ್ನು. ಸುಧಾಕರನ್ ಲಗ್ನಪತ್ರಿಕೆಯಲ್ಲಿ ದತ್ತು ಮಗ ಎಂದು ಜಯಲಲಿತಾ ಘೋಷಿಸಿದ್ದರು.100 ಕೋಟಿ ರೂ. ಖರ್ಚು ಮಾಡಿ ಸುಧಾಕರನ್ ಮದುವೆ ಮಾಡಿದ್ದರು. 1996ರ ಚುನಾವಣೆಯಲ್ಲಿ ಜಯಲಲಿತಾಳನ್ನು ಸೋಲಿಸಿದ್ದಕ್ಕಾಗಿ  ದತ್ತು ಮಗ ಸುಧಾಕರನ್ ಅವರನ್ನು ದೂರ ಮಾಡಿದ್ದರು. ನಂತರದ ಕೆಲ ವರ್ಷಗಳ ನಂತರ ಸರ್ಕಾರದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದ ಕಾರಣ ಈತ ತನ್ನ ಮಗನಲ್ಲ ಎಂದು ದೂರ ಮಾಡಿದ್ದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!