ಜಯಾ ಆರಾಧಿಸುತ್ತಿದ್ದ ಇಬ್ಬರು ಕ್ರಿಕೆಟಿಗರು!

Published : Dec 08, 2016, 11:27 AM ISTUpdated : Apr 11, 2018, 12:36 PM IST
ಜಯಾ ಆರಾಧಿಸುತ್ತಿದ್ದ ಇಬ್ಬರು ಕ್ರಿಕೆಟಿಗರು!

ಸಾರಾಂಶ

ಸ್ವತಃ ಜಯಲಲಿತಾ ಅವರೇ ಯಾರ ಅಭಿಮಾನಕ್ಕೆ ಒಳಗಾಗಿದ್ದರು ಎನ್ನುವುದಕ್ಕೆ ಬಾಲಿವುಡ್‌ ನಟಿ ಶರ್ಮಿಳಾ ಟಾಗೋರ್‌ ರಹಸ್ಯ ಬಿಚ್ಚಿಟ್ಟಿದ್ದಾರೆ.

ನವದೆಹಲಿ(ಡಿ. 08): ಸುಪ್ರಿಂ ಕೋರ್ಟ್‌'ನ ಮಾಜಿ ಜಡ್ಜ್‌ ಮಾರ್ಕಂಡೇಯ ಕಾಟ್ಜು ಕೆಲ ತಿಂಗಳ ಹಿಂದೆ ಜಯಲಲಿತಾ ಅವರ ಜೊತೆ ತಮಗಿದ್ದ ಕ್ರಷ್‌ ಅನ್ನು ಫೇಸ್‌'ಬುಕ್‌'ನಲ್ಲಿ ಬರೆದುಕೊಂಡಿದ್ದರು. ‘ಯವ್ವನದ ದಿನಗಳಲ್ಲಿ ಅವರ ಮೇಲೆ ಪ್ರೀತಿ ಚಿಗುರಿತ್ತು. ಆಸ್ಪತ್ರೆಯಿಂದ ಅವರು ಬೇಗನೆ ಗುಣಮುಖರಾಗಿ ಬರಲಿ' ಎಂದು ಪ್ರಾರ್ಥಿಸಿದ್ದರು. ಇದು ಜಯಲಲಿತಾ ಮೇಲಿದ್ದ ಕ್ರಷ್‌ ಆಯಿತು.

ಸ್ವತಃ ಜಯಲಲಿತಾ ಅವರೇ ಯಾರ ಅಭಿಮಾನಕ್ಕೆ ಒಳಗಾಗಿದ್ದರು ಎನ್ನುವುದಕ್ಕೆ ಬಾಲಿವುಡ್‌ ನಟಿ ಶರ್ಮಿಳಾ ಟಾಗೋರ್‌ ರಹಸ್ಯ ಬಿಚ್ಚಿಟ್ಟಿದ್ದಾರೆ. ಶರ್ಮಿಳಾ ಪತಿ, ಮಾಜಿ ಕ್ರಿಕೆಟಿಗ ಮನ್ಸೂರ್‌ ಅಲಿಖಾನ್‌ ಪಟೌಡಿ ಅವರನ್ನು ಜಯಾ ಅಭಿಮಾನಿಸುತ್ತಿದ್ದರಂತೆ. ‘ನನ್ನ ಪತಿಯ ಬ್ಯಾಟಿಂಗ್‌ ಅನ್ನು ಜಯಾ ಬಹಳ ಇಷ್ಟಪಟ್ಟು ನೋಡುತ್ತಿದ್ದರು. ಪಟೌಡಿ ಆಟ ನೋಡಲೆಂದೇ ಒಂದು ಬೈನಾಕ್ಯುಲರ್‌ ಹಿಡಿದು ಚೆನ್ನೈನ ಸ್ಟೇಡಿಯಮ್ಮಿಗೆ ಬರುತ್ತಿದ್ದರು' ಎಂದಿದ್ದಾರೆ ಶರ್ಮಿಳಾ.

ಪಟೌಡಿಯನ್ನು ಅಭಿಮಾನಿಸುತ್ತಿದ್ದ ಜಯಾ ಅವರನ್ನು ಶರ್ಮಿಳಾ ದಂಪತಿ ಹಿಂದೊಮ್ಮೆ ಭೇಟಿ ಮಾಡಿತ್ತಂತೆ. ಅರವತ್ತರ ದಶಕವದು. ಚೆನ್ನೈನ ಚರ್ಚ್ ಪಾರ್ಕ್ ಸ್ಕೂಲಿನಲ್ಲಿ ಓದುತ್ತಿದ್ದ ಜಯಾ ಅವರನ್ನು ಭೇಟಿಯಾಗಿದ್ದರಂತೆ.

ಜಯಾ ಅವರು ಕ್ರಿಕೆಟಿಗ ಪಟೌಡಿ ಅವರನ್ನು ಕೇವಲ ಅಭಿಮಾನಿಸುತ್ತಿದ್ದರಷ್ಟೇ. ಆದರೆ, ಇವರು ಕ್ರಷ್‌ ಇಟ್ಟುಕೊಂಡಿದ್ದು ಗುಜರಾತ್‌ ಮೂಲದ ಕ್ರಿಕೆಟಿಗ ನಾರಿ ಕಂಟ್ರಾಕ್ಟರ್‌ ಅವರನ್ನು. ಇದನ್ನು ಜಯಲಲಿತಾ ಸಿಮಿ ಗೇರ್‌'ವಾಲ್‌ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ‘ಶಾಲಾ ದಿನಗಳಲ್ಲಿ ಕ್ರಿಕೆಟಿಗ ನಾರಿ ಕಂಟ್ರಾಕ್ಟರ್‌, ನಟ ಶಮ್ಮಿ ಕಪೂರ್‌ ಅವರ ಕ್ರಷ್‌'ಗೆ ಒಳಗಾಗಿದ್ದೆ' ಎಂದು ನಗುತ್ತಾ ಹೇಳಿಕೊಂಡಿದ್ದರು. ಈಗ ನಾರಿ ಕಂಟ್ರಾಕ್ಟರ್‌ಗೆ 82 ವರ್ಷ. ಈ ಬಗ್ಗೆ ಕಂಟ್ರಾಕ್ಟರ್‌'ರನ್ನು ಕೇಳಿದಾಗ ಅವರು ಹೇಳುವುದಿಷ್ಟು; ‘ನಾನು ಯಾವತ್ತೂ ಜಯಲಲಿತಾರನ್ನು ಭೇಟಿ ಆಗಿರಲಿಲ್ಲ. ಆದರೆ, ಅವರೊಮ್ಮೆ ಸಂದರ್ಶನದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿದ್ದನ್ನು ಕೇಳಿದ್ದೇನೆ'!

(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗ್ಳೂರು ಕಂಪನಿಯಿಂದ 3 ಲಕ್ಷಲಂಚ: ಸಿಬಿಐನಿಂದ ಲೆ.ಕರ್ನಲ್‌ ಬಂಧನ, ಬೆಚ್ಚಿಬೀಳಿಸುವ ಭ್ರಷ್ಟಾಚಾರ ಬಯಲು!
ಎಂಎಸ್‌ಎಂಇ ಅಭಿವೃದ್ಧಿಗೆ ಸಂಪೂರ್ಣ ಸಹಕಾರ : ಸಚಿವೆ ಶೋಭಾ ಕರಂದ್ಲಾಜೆ