
ನವದೆಹಲಿ (ಡಿ.27): ಜಮ್ಮು ಕಾಶ್ಮೀರದಲ್ಲಿ ಸೇನಾಪಡೆಗಳಿಂದ ಹತನಾದ ಉಗ್ರ ನೂರ್ ಮೊಹಮ್ಮದ್ ತಾಂತ್ರೆ ಬಿಜೆಪಿ ಸೇರಲು ಬಯಸಿದ್ದ ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ.
ಈತ ಬಿಜೆಪಿ ಕಚೇರಿಗೆ ತೆರಳಿ ಅಲ್ಲಿ ಸದಸ್ಯತ್ವ ಪಡೆದುಕೊಳ್ಳಲೂ ಯತ್ನಿಸಿದ್ದನೆನ್ನಲಾಗಿದೆ. ಇನ್ನು ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿ ಮುಖಂಡರನ್ನು ಹತ್ಯೆ ಮಾಡುವ ಯೋಚನೆಯನ್ನು ಮಾಡಿದ್ದನೆನ್ನಲಾಗಿದೆ.
ಜೈಷ್ ಉಗ್ರ ಸಂಘಟನೆ ಕಾಶ್ಮೀರದಲ್ಲಿ ಮತ್ತೆ ತಲೆ ಎತ್ತುವಂತಾಗಲು ಅದರ ಹಿಂದೆ ಇದ್ದ ಮೆದುಳು ಎಂದೆ ಕರೆಯಲಾಗುತ್ತಿದ್ದ ನೂರ್ ಮೊಹಮ್ಮದ್ ತಾಂತ್ರೆಯನ್ನು ಇದೀಗ ಭದ್ರತಾ ಪಡೆಗಳು ಎನ್ಕೌಂಟರ್ ಮಾಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.