
ದಾವಣಗೆರೆ (ಡಿ.27): ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ, ಹಣ, ಹೆಂಡದ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲಬಹುದೆಂದು ಸಿದ್ದರಾಮಯ್ಯ ಭಾವಿಸಿದ್ದಾರೆ ಅದು ಸಾಧ್ಯವಿಲ್ಲ ಎಂದು ಹೊನ್ನಾಳಿ ಪರಿವರ್ತನಾ ವೇದಿಕೆಯಲ್ಲಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನೀವು ಅಚ್ಛೇ ದಿನ ಯಾವಾಗ ಬರುತ್ತದೆ ಎಂದು ಕೇಳಿದ್ದಿರಿ ನಿಮ್ಮನ್ನು ಮನೆಗೆ ಕಳಿಸಿದಾಗ ಅಚ್ಛೆ ದಿನ ಬರುತ್ತದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಂಗಳೂರು ರೇಪ್ ಸಿಟಿಯಾಗಿದೆ. 3,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಈ ಎಲ್ಲವುಗಳ ಬಗ್ಗೆ ಒಮ್ಮೆ ಕೂತು ಯೋಚಿಸಿ ಎಂದು ಬಿಎಸ್'ವೈ ಹೇಳಿದ್ದಾರೆ.
ಹಸಿರು ಶಾಲು ಹಾಕಿಕೊಂಡಿದ್ದಕ್ಕೆ ತೆಗಳುವ ಸಿದ್ದರಾಮಯ್ಯ ನೀವು ರೈತರ ಬಗ್ಗೆ ಯಾವಾತ್ತಾದರೂ ಯೋಚಿಸಿದ್ದೀರಾ? ಆರ್ಥಿಕ ದಿವಾಳಿತನವಾಗಿಲ್ಲವೆಂದು ಹೇಳುತ್ತೀರಿ. ಆದ್ರೆ ಬೆಂಗಳೂರಿನ ಕಾರ್ನರ್ ಸೈಟ್ ಒತ್ತೆ ಇಟ್ಟಿದ್ದು ಏಕೆ? ಎಂಎಲ್'ಎ, ಎಂಎಲ್'ಸಿಗಳಿಗೆ ವೇತನ ಕೊಟ್ಟಿಲ್ಲವೇಕೆ ? ಎಂದು ಪ್ರಶ್ನಿಸಿದ್ದಾರೆ.
ಮಹಾದಾಯಿ ವಿಚಾರದ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಮೂವತ್ತು ವರ್ಷದ ನಂತರ ಗೋವಾದ ಸಿಎಂ ಒಪ್ಪಿಕೊಂಡಿದ್ದಾರೆ . ಆದರೆ ಕಾಂಗ್ರೆಸ್ ಪ್ರೇರಿತರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ .ನಾವು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಕ್ಕೆ ಪೊಲೀಸ್ ಲಾಠಿ ಚಾರ್ಜ್ ಮಾಡಿಸುತ್ತಾರೆ . ಸಮಸ್ಯೆ ಬಗೆಹರಿಸಲು ಮುಂದಾಗಿರುವ ಗೋವಾ ಸಿಎಂ ಕ್ರಮಕ್ಕೆ ವಿರೋಧ ಮಾಡುತ್ತಿರುವ ಸಿದ್ದರಾಮಯ್ಯನವರೇ, ನಿಮಗೆ ನಾಚಿಕೆ ಆಗೋಲ್ವ? ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.