ಸಿಬಿಐಗೆ ದ್ವಾರ ತೆರೆದ ಜಗನ್: ನಾಯ್ಡು ಆದೇಶ ರದ್ದುಗೊಳಿಸಿದ ಸಿಎಂ!

Published : Jun 06, 2019, 05:30 PM ISTUpdated : Jun 06, 2019, 07:27 PM IST
ಸಿಬಿಐಗೆ ದ್ವಾರ ತೆರೆದ ಜಗನ್: ನಾಯ್ಡು ಆದೇಶ ರದ್ದುಗೊಳಿಸಿದ ಸಿಎಂ!

ಸಾರಾಂಶ

ನಾಯ್ಡು ಆದೇಶ ರದ್ದುಗೊಳಿಸಿದ ಜಗನ್ ರೆಡ್ಡಿ| ಸಿಬಿಐಗೆ ಈ ಹಿಂದಿದ್ದ ಸಂಪೂರ್ಣ ಅಧಿಕಾರ ಮರಳಿಸಿದ ಸಿಎಂ| ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ಸಂಪೂರ್ಣ ಅಧಿಕಾರ| ನಾಯ್ಡು ಆದೇಶಕ್ಕೆ ಬ್ರೇಕ್ ಹಾಕಿದ ಆಂಧ್ರ ನೂತನ ಸಿಎಂ| ತನಿಖೆಗಾಗಿ ರಾಜ್ಯ ಸರ್ಕಾರದ ಅನುಮತಿ ಬೇಕಿಲ್ಲ ಎಂದ ಜಗನ್|

ಹೈದರಾಬಾದ್(ಜೂ.06): ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ತಮ್ಮ ಅಧಿಕಾರ ನಡೆಸುವ ಪರಿಯನ್ನು ತಿಳಿಸಿರುವ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಮಾಜಿ ಸಿಎಂ ನಾಯ್ಡು ಅಧಿಕಾರಾವಧಿಯ ಆದೇಶಗಳ ಮರು ಪರಾಮರ್ಶೆ ನಡೆಸಿದ್ದಾರೆ.

ಪ್ರಮುಖವಾಗಿ ಸಿಬಿಐಗೆ ರಾಜ್ಯದಲ್ಲಿ ಯಾವುದೇ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕೆಂಬ ನಾಯ್ಡು ಆದೇಶವನ್ನು ಜಗನ್ ರದ್ದುಗೊಳಿಸಿದ್ದಾರೆ.

ಸಿಬಿಐಗೆ ರಾಜ್ಯದಲ್ಲಿ ಮುಕ್ತ ಅವಕಾಶ ನೀಡಿರುವ ಜಗನ್ ಮೋಹನ್ ರೆಡ್ಡಿ, ತನಿಖೆಗಾಗಿ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಜಗನ್ ಆದೇಶಿಸಿದ್ದಾರೆ.

"

ಈ ಹಿಂದೆ ಚಂದ್ರಬಾಬು ನಾಯ್ಡು ಸರ್ಕಾರ ಸಿಬಿಐಗೆ ಸೀಮಿತ ಅಧಿಕಾರ ನೀಡಿತ್ತು. ಅಲ್ಲದೇ ತನ್ನ ಪೂರ್ವಾನುಮತಿ ಇಲ್ಲದೇ ರಾಜ್ಯದಲ್ಲಿ ಯಾವುದೇ ತನಿಖೆಯನ್ನು ಸ್ವತಂತ್ರವಾಗಿ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಆದೇಶಿಸಿತ್ತು.

ಆದರೆ ಜಗನ್ ರೆಡ್ಡಿ ನೇತೃತ್ವದ ನೂತನ ಸರ್ಕಾರ ಈ ಆದೇಶವನ್ನು ರದ್ದುಗೊಳಿಸಿದ್ದು, ಸಿಬಿಐಗೆ ಈ ಮೊದಲಿದ್ದ ಸಂಪೂರ್ಣ ಅಧಿಕಾರವನ್ನು ನೀಡಿದೆ.

ಇಷ್ಟೇ ಅಲ್ಲದೇ ನಾಯ್ಡು ಜಾರಿಗೆ ತಂದಿದ್ದ ಅನ್ನದಾತ ಸುಖೀಭವ ಯೋಜನೆಯನ್ನು ಬದಲಿಸಿರುವ ರೈತೂ ಭರೋಸಾ ಎಂಬ ಯೋಜನೆಯನ್ನು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಜಾರಿಗೆ ತಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ