ವಾಜಪೇಯಿ ಸರ್ಕಾರವನ್ನು ಮೆಟ್ಟಿ ನಿಂತು ಮೊದಲ ಬಾರಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಪಡೆದ ಉಕ್ಕಿನ ಮಹಿಳೆ!

Published : Dec 06, 2016, 09:14 AM ISTUpdated : Apr 11, 2018, 01:12 PM IST
ವಾಜಪೇಯಿ ಸರ್ಕಾರವನ್ನು ಮೆಟ್ಟಿ ನಿಂತು ಮೊದಲ ಬಾರಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಪಡೆದ ಉಕ್ಕಿನ ಮಹಿಳೆ!

ಸಾರಾಂಶ

ತಮಿಳುನಾಡಿನ ಸಿಎಂ ಜೆ. ಜಯಲಲಿತಾ ನಿನ್ನೆ ತಡರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 1990 ರಲ್ಲಿ AIADMK ಪಕ್ಷವನ್ನು ಒಗ್ಗೂಡಿಸಿದ ಜಯಲಲಿತಾ 1991 ರಲ್ಲಿ ಬಹುಮತ ಪಡೆಯುವ ಮೂಲಕ ತಮಿಳುನಾಡು ರಾಜಕೀಯ ವಲಯದಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದರು. ಹೀಗೆ ರಾಜಕೀಯ ರಂಗಪ್ರವೇಶ ಮಾಡಿದ್ದ ಜಯಾ 1999ರ ವೇಳೆಗೆ ರಾಷ್ಟ್ರ ರಾಜಕಾರಣದಲ್ಲೂ ಹೆಜ್ಜೆ ಇಟ್ಟಿದ್ದರು.

ನವದೆಹಲಿ(ಡಿ.06): ತಮಿಳುನಾಡಿನ ಸಿಎಂ ಜೆ. ಜಯಲಲಿತಾ ನಿನ್ನೆ ತಡರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 1990 ರಲ್ಲಿ AIADMK ಪಕ್ಷವನ್ನು ಒಗ್ಗೂಡಿಸಿದ ಜಯಲಲಿತಾ 1991 ರಲ್ಲಿ ಬಹುಮತ ಪಡೆಯುವ ಮೂಲಕ ತಮಿಳುನಾಡು ರಾಜಕೀಯ ವಲಯದಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದರು. ಹೀಗೆ ರಾಜಕೀಯ ರಂಗಪ್ರವೇಶ ಮಾಡಿದ್ದ ಜಯಾ 1999ರ ವೇಳೆಗೆ ರಾಷ್ಟ್ರ ರಾಜಕಾರಣದಲ್ಲೂ ಹೆಜ್ಜೆ ಇಟ್ಟಿದ್ದರು.

17 ಎಪ್ರಿಲ್ 1999ರ ಆ ದಿನ...

1999ರ ಎಪ್ರಿಲ್ 17 ದಿನಾಂಕವನ್ನು ಯಾರು ತಾನೆ ಮರೆಯಲು ಸಾಧ್ಯ? ಯಾಕೆಂದರೆ ಅದೇ ದಿನ 13 ತಿಂಗಳು ದೇಶದಲ್ಲಿ ಆಡಳಿತ ನಡೆಸಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಕೇವಲ ಒಂದು ಮತದ ಅಂತರದಿಂದ ಬಿದ್ದಿತ್ತು. ಅಲ್ಲವಯವರೆಗೂ ಜಯಲಲಿತಾ ಸೋನಿಯಾ ಗಾಂಧಿಗೆ ಆಪ್ತರಾಗಿರಲಿಲ್ಲ. ಆದರೆ ಮಾರ್ಚ್ 1999ರಲ್ಲಿ ಸೋನಿಯಾ ಹಾಗೂ ಜಯಲಲಿತಾ ಪರಸ್ಪರ ಭೇಟಿಯಾಗಿದ್ದರು. ಈ ಭೇಟಿಯ ಬಳಿಕವೇ ವಾಜಪೇಯಿ ಸರ್ಕಾರದೊಂದಿಗಿನ ತನ್ನ ಬೆಂಬಲವನ್ನು ಹಿಂತೆಗೆಯಲು ಜಯಲಲಿತಾ ಮುಂದಾಗಿದ್ದರಂತೆ. ಇದಾದ ಬಳಿಕ ನಡೆದಿರುವುದೆಲ್ಲವೂ ಈಗ ಇತಿಹಾಸ, ಇವೆಲ್ಲದರ ಬಳಿಕ ಉತ್ತರ ಭಾರತದ ಜನರ ಬಾಯಿಯಲ್ಲಿ ಜಯಲಲಿತಾ ಹೆಸರು ಅಚ್ಚಳಿಯದೆ ಉಳಿಯಿತು.

ಆದರೆ ಇನ್ನು ಕೆಲವು ವಿಶ್ಲೇಷಕರು ಅನ್ವಯ 'ಅಟಲ್ ವಾಜಪೇಯಿ ಸರ್ಕಾರದ ಅನುಯಾಯಿಯಾಗಿದ್ದ ಜಯಲಲಿತಾ ತತ್ಕಾಲಿಕವಾಗಿ ಡಿಎಂಕೆ ಸರ್ಕಾರವನ್ನು ವಜಾಗೊಳಿಸುವ ಬೇಡಿಕೆಯ ಮೇಲಿನ ಸಮರ್ಥನೆಯನ್ನು ಹಿಂಪಡೆಯುವಂತೆ ಹೆದರಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಜಯಲಲಿತಾ ತನ್ನ ಮೇಲಿರುವ ಭ್ರಷ್ಟಾಚಾರ ಆರೋಪಗಳಿಂದ ನುಣುಚಿಕೊಳ್ಳಲು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷ ಆರೋಪಿಸಿತ್ತು. ಎರಡೂ ಸರ್ಕಾರಗಳ ನಡುವೆ ಸಾಮರಸ್ಯ ಮೂಡಲಿಲ್ಲ ಹೀಗಾಗಿ ಜಯಲಲಿತಾ ಬಿಜೆಪಿಗೆ ನೀಡುತ್ತಿದ್ದ ಬೆಂಬಲವನ್ನು ಹಿಂಪಡೆದರು. ಇದರಿಂದಾಗಿ ಬಿಜೆಪಿ ಪಕ್ಷದ ಸಂಸದ ಅಟಲ್ ಬಿಹಾರಿ ವಾಜಪೇಯಿ ಕೇವಲ ಒಂದು ಮತದ ಅಭಾವದಿಂದಾಗಿ ಸೋಲನುಭವಿಸಬೇಕಾಯಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್ ರೀತಿಯಲ್ಲೇ ಮತ್ತೊಂದು ಉಗ್ರ ಕೃತ್ಯ, ಗುಂಡಿನ ದಾಳಿಯಲ್ಲಿ 10 ಸಾವು, ಹಲವರು ಗಂಭೀರ
ಐಟಿ ಪಾರ್ಕ್ ಗುತ್ತಿಗೆ 30 ವರ್ಷ, ವಿಸ್ತರಣೆಗೂ ಅವಕಾಶ: ಸಚಿವ ಪ್ರಿಯಾಂಕ್‌ ಖರ್ಗೆ