ಪಂಜಾಬ್ ಆರೆಸ್ಸೆಸ್  ನಾಯಕರ ಹತ್ಯೆಯಲ್ಲಿ ಐಎಸ್‌ಐ ಕೈವಾಡ!

By Suvarna Web DeskFirst Published Nov 9, 2017, 3:15 PM IST
Highlights

ಪಂಜಾಬ್‌ನಲ್ಲಿ ಆರೆಸ್ಸೆಸ್ ನಾಯಕ ಜಗದೀಶ್ ಕುಮಾರ್ ಗಾಗ್ನೇಜ ಸೇರಿದಂತೆ ಕೆಲವು ಪ್ರಮುಖರ ಹತ್ಯೆ ಪ್ರಕರಣಗಳಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡವಿರುವುದು ಇದೇ ಮೊದಲ ಬಾರಿ ಬೆಳಕಿಗೆ ಬಂದಿದೆ.

ಚಂಡೀಗಢ: ಪಂಜಾಬ್‌ನಲ್ಲಿ ಆರೆಸ್ಸೆಸ್ ನಾಯಕ ಜಗದೀಶ್ ಕುಮಾರ್ ಗಾಗ್ನೇಜ ಸೇರಿದಂತೆ ಕೆಲವು ಪ್ರಮುಖರ ಹತ್ಯೆ ಪ್ರಕರಣಗಳಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡವಿರುವುದು ಇದೇ ಮೊದಲ ಬಾರಿ ಬೆಳಕಿಗೆ ಬಂದಿದೆ.

ಹತ್ಯೆ ಪ್ರಕರಣಗಳಲ್ಲಿ ಭಯೋತ್ಪಾದಕ ಘಟಕಗಳ ಕೈವಾಡದ ಬಗ್ಗೆ, ನಾಲ್ವರು ದುಷ್ಕರ್ಮಿಗಳ ಬಂಧನದ ಬಳಿಕ ಬಹಿರಂಗವಾಗಿದೆ.

Latest Videos

ಈ ಸಂಬಂಧ ವಿಶೇಷ ಪತ್ರಿಕಾಗೋಷ್ಠಿ ನಡೆಸಿದ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜ್ಯದಲ್ಲಿ ಕೋಮು ಘರ್ಷಣೆ ಸೃಷ್ಟಿಸಿ, ಶಾಂತಿ ಕದಡಲು ಐಎಸ್‌ಐ ತಂತ್ರ ರೂಪಿಸಿದ್ದ ಬಗ್ಗೆ ತಿಳಿಸಿದ್ದಾರೆ.

ಬಂಧಿತ ಶಂಕಿತರಲ್ಲಿ ಮೂವರ ಗುರುತು ಬಹಿರಂಗ ಪಡಿಸಲಾಗಿದ್ದು, ನಾಲ್ಕನೇ ವ್ಯಕ್ತಿಯ ಗುರುತು ಬಹಿರಂಗ ಪಡಿಸಲಾಗಿಲ್ಲ.

ಆರೆಸ್ಸೆಸ್ ನಾಯಕ ಜಗದೀಶ್, ರವೀಂದರ್ ಗೋಸೈನ್, ಶಿವಸೇನೆ ಕಾರ್ಮಿಕ ಘಟಕದ ಮುಖ್ಯಸ್ಥ ದುರ್ಗಾದಾಸ್ ಗುಪ್ತಾ, ಹಿಂದೂ ತಖ್ತ್ ಪ್ರಚಾರ ನಿರ್ವಾಹಕ ಅಮಿತ್ ಶರ್ಮಾ, ಡೇರಾ ಸಚ್ಚಾ ಸೌದಾ ಬೆಂಬಲಿಗ ಸತ್ಪಾಲ್ ಕುಮಾರ್, ಧರ್ಮಗುರು ಸುಲ್ತಾನ್ ಮಾಸಿಹ್ ಮುಂತಾದವರ ಹತ್ಯೆ ಪ್ರಕರಣ ಭೇದಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

 

click me!