ದಾವೂದ್ ಆಸ್ತಿ ಕೊಳ್ಳಲು ಹಿಂದು ಮಹಾಸಭಾ ಸಜ್ಜು

Published : Nov 09, 2017, 02:10 PM ISTUpdated : Apr 11, 2018, 01:05 PM IST
ದಾವೂದ್ ಆಸ್ತಿ ಕೊಳ್ಳಲು ಹಿಂದು ಮಹಾಸಭಾ ಸಜ್ಜು

ಸಾರಾಂಶ

ಮುಂಬೈನಲ್ಲಿ ಇದೇ 14ನೇ ತಾರೀಖು ಪಾತಕಿ ದಾವೂದ್ ಇಬ್ರಾಹಿಂನ 3 ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹಿಂದು ಮಹಾಸಭಾ ಸಂಘಟನೆ ಹಾಗೂ ಸುಪ್ರೀಂ ಕೋರ್ಟ್ ವಕೀಲರೊಬ್ಬ ರು ಆಸ್ತಿ ಖರೀದಿಗೆ ಮುಂದಾಗಿದ್ದಾರೆ.

ಮುಂಬೈ: ಮುಂಬೈನಲ್ಲಿ ಇದೇ 14ನೇ ತಾರೀಖು ಪಾತಕಿ ದಾವೂದ್ ಇಬ್ರಾಹಿಂನ 3 ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹಿಂದು ಮಹಾಸಭಾ ಸಂಘಟನೆ ಹಾಗೂ ಸುಪ್ರೀಂ ಕೋರ್ಟ್ ವಕೀಲರೊಬ್ಬ ರು ಆಸ್ತಿ ಖರೀದಿಗೆ ಮುಂದಾಗಿದ್ದಾರೆ.

ಮಂಗಳವಾರ ಬೆಳಗ್ಗೆ 2 ಗಂಟೆಗಳ ಕಾಲ ಈ ಆಸ್ತಿಯನ್ನು ವೀಕ್ಷಿಸಲು ಬಿಡ್‌ದಾರರಿಗೆ ಅವಕಾಶ ಮಾಡಿಕೊಡಲಾಗಿತ್ತು.

ಈ ವೇಳೆ ಆಸ್ತಿ ಖರೀದಿ ಬಗ್ಗೆ ಉತ್ಸುಕತೆ ಹೊಂದಿರುವ ಹಿಂದು ಮಹಾಸಭಾದ ಡಾ| ಇಂದಿರಾ ತಿವಾರಿ ಪ್ರತಿಕ್ರಿಯೆ ನೀಡಿ, ‘ನಾವು ಈ ಆಸ್ತಿಗಳ ಖರೀದಿಯಲ್ಲಿ ಯಶಸ್ವಿಯಾದರೆ ಇಲ್ಲಿ ಮಕ್ಕಳ ಅನಾಥಾಶ್ರಮ ನಿರ್ಮಿಸಲಾಗುವುದು. ಬಡವರಿಗೆ ಆಶ್ರಯ ನೀಡಲಾಗುವುದು’ ಎಂದರು.

2015ಲ್ಲಿ ಹಿಂದು ಮಹಾಸಭೆಯು ದಾವೂದ್‌ನ ಕಾರು ಖರೀದಿಸಿ ಸುಟ್ಟು ಹಾಕಿತ್ತು. ಆತನಿಗೆ ಪಾಠ ಕಲಿಸುವ ಉದ್ದೇಶದಿಂದ ಹೀಗೆ ಮಾಡಿದ್ದೆವು ಎಂದು ಇಂದಿರಾ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ