ಮೋದಿಗೆ ತಿರುಗುಬಾಣವಾಯ್ತಾ ಜಿಎಸ್'ಟಿ? ಕಡಿಮೆ ಆಯ್ತಾ ಮೋದಿ ಹವಾ?

Published : Oct 24, 2017, 08:59 PM ISTUpdated : Apr 11, 2018, 01:13 PM IST
ಮೋದಿಗೆ ತಿರುಗುಬಾಣವಾಯ್ತಾ ಜಿಎಸ್'ಟಿ? ಕಡಿಮೆ ಆಯ್ತಾ ಮೋದಿ ಹವಾ?

ಸಾರಾಂಶ

ನೋಟ್​ ಬ್ಯಾನ್ ಮತ್ತು ಜಿಎಸ್​ಟಿ ಜಾರಿ ನಂತರ ಮೋದಿಯ ಜನಪ್ರಿಯತೆ ಮೊದಲಿನಂತೆ ಉಳಿದಿಲ್ಲ ಅನ್ನೋ ಮಾತುಗಳಿವೆ. ಮೋದಿಯ ನಿರ್ಧಾರಗಳಿಂದಾಗಿ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಮಧ್ಯೆ ಗುಜರಾತ್ ಚುನಾವಣೆ ಎದುರಾಗುತ್ತಿದೆ.  ಸತತ 22 ವರ್ಷಗಳಿಂದ ಗುಜರಾತ್​ನಲ್ಲಿ ಅನಭಿಷಕ್ತ ದೊರೆಯಾಗಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಈ ಭಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.

ನವದೆಹಲಿ (ಅ.23): ನೋಟ್​ ಬ್ಯಾನ್ ಮತ್ತು ಜಿಎಸ್​ಟಿ ಜಾರಿ ನಂತರ ಮೋದಿಯ ಜನಪ್ರಿಯತೆ ಮೊದಲಿನಂತೆ ಉಳಿದಿಲ್ಲ ಅನ್ನೋ ಮಾತುಗಳಿವೆ. ಮೋದಿಯ ನಿರ್ಧಾರಗಳಿಂದಾಗಿ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಮಧ್ಯೆ ಗುಜರಾತ್ ಚುನಾವಣೆ ಎದುರಾಗುತ್ತಿದೆ.  ಸತತ 22 ವರ್ಷಗಳಿಂದ ಗುಜರಾತ್​ನಲ್ಲಿ ಅನಭಿಷಕ್ತ ದೊರೆಯಾಗಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಈ ಭಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.

ಮೋದಿ  ಸರ್ಕಾರದ  ಕ್ರಾಂತಿಕಾರಿ  ನಿರ್ಧಾರಗಳಾದ  ನೋಟ್​ಬ್ಯಾನ್ ಮತ್ತು ಜಿಎಸ್​ಟಿ ತಿರುಗುಬಾಣವಾಗುತ್ತಿವೆ. ನೋಟ್​ ಬ್ಯಾನ್ ವೈಫಲ್ಯ ಮತ್ತು ಜಿಎಸ್​ಟಿ ಅಳವಡಿಕೆಯಲ್ಲಿನ ಹಿನ್ನೆಡೆಯನ್ನೇ ಕಾಂಗ್ರೆಸ್​ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.  ಜಿಎಸ್​ಟಿಯಿಂದಾಗಿ  ಗುಜರಾತ್​ನ  ಜವಳಿ ಉದ್ಯಮ ಮತ್ತು ಸಣ್ಣ ಕೈಗಾರಿಕೆಗಳು ಸಾಕಷ್ಟು ನಷ್ಟಕ್ಕೆ ತುತ್ತಾಗಿವೆ. ಯುಪಿಎ ಸರ್ಕಾರದ ವಿರುದ್ಧ ತೆರಿಗೆ ಭಯೋತ್ಪಾದನೆಯ ಆರೋಪ ಮಾಡಿದ್ದ ಪ್ರಧಾನಿ ಮೋದಿ ಈಗ ಅದೇ ಆರೋಪವನ್ನು ಎದುರಿಸುವಂತಾಗಿದೆ. ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆ ಕಾಂಗ್ರೆಸ್​ ಪಾಲಿನ ಮತಗಳಾಗಿ ಪರಿವರ್ತನೆಯಾಗಬಾರದು ಎಂಬ ಕಾರಣಕ್ಕೆ ಮೋದಿ ಗುಜರಾತ್​ಗೆ ಯೋಜನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅದಕ್ಕೆ ಉತ್ತರ ಉದಾಹರಣೆ ಅಹಮದಾಬಾದ್-ಮುಂಬೈ ಬುಲೆಟ್ ಟ್ರೇನ್ ಯೋಜನೆ.

ಕಳೆದೊಂದು ದಶಕದಲ್ಲೇ ದೇಶದ ಡಿಜಿಪಿ ಅತ್ಯಂತ ಕಡಿಮೆ ಅಂದರೆ ಶೇ.5.7 ಕ್ಕೆ ಕುಸಿದಿದೆ. ದೇಶದ ಆರ್ಥಿಕ ಪ್ರಗತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದ ಮೋದಿ ನೋಟ್​ ಬ್ಯಾನ್ ಮತ್ತು ಜಿಎಸ್​ಟಿ ಜಾರಿಯಿಂದಾಗಿ ಲೆಕ್ಕ ತಪ್ಪಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಬ್ಯಾನ್​ ಆದ 15.44 ಲಕ್ಷ ಕೋಟಿ ಹಳೆಯ ನೋಟುಗಳಲ್ಲಿ ಶೇ 99 ರಷ್ಟು ನೋಟುಗಳು ಆರ್​ಬಿಐಗೆ ವಾಪಸ್​ ಬಂದಿವೆ. ಜಿಎಸ್​ಟಿ ಜಾರಿಗೆ ಬಂದ ನಂತರವೂ ಅಗತ್ಯ ವಸ್ತುಗಳ ಬೆಲೆಗಳು ಏರುದಿಕ್ಕಿನಲ್ಲೇ ಸಾಗುತ್ತಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಮುಖವಾಗುತ್ತಿದ್ದರೂ ದೇಶದಲ್ಲಿ ಮಾತ್ರ ಪೆಟ್ರೋಲ್​ ದರ ಏರುಗತಿಯಲ್ಲೇ ಇದೆ. ಮೋದಿಯ ಈ ನಿರ್ಧಾರಗಳು ಅವರ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಿವೆ ಎನ್ನಲಾಗುತ್ತಿದೆ.

ಗುಜರಾತ್ ವಿಧಾನಸಭೆಗೆ ಚುನಾವಣಾ ದಿನಾಂಕ ಇನ್ನೂ ನಿಗದಿಯಾಗಿಲ್ಲವಾದರೂ ಅಕ್ಟೋಬರ್​ನಲ್ಲೇ ಮೋದಿ ಮೂರು ಬಾರಿ ಮೋದಿ ಗುಜರಾತ್​ಗೆ ಭೇಟಿ ನೀಡಿದ್ದಾರೆ. ಈ ವರ್ಷದಲ್ಲೇ ಒಂಭತ್ತು ಬಾರಿ ಮೋದಿ ತವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಅಂದರೆ ಸ್ವತಃ ಮೋದಿಯವರಿಗೂ ಈ ಬಾರಿ ಗೆಲುವು ಸುಲಭ ಅಲ್ಲ ಅನ್ನೋದು ಮನವರಿಕೆಯಾಗಿದೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗುತ್ತಿವೆ. ಗುಜರಾತ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರೆ ರಾಷ್ಟ್ರಮಟ್ಟದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ. ಈ ಕಾರಣದಿಂದಲೇ ಗುಜರಾತ್ ಉಳಿಸಿಕೊಳ್ಳಲು ಮೋದಿ ಶತ ಪ್ರಯತ್ನ ನಡೆಸುತ್ತಿದ್ದಾರೆ. ಮೋದಿ ಪ್ರಧಾನಿಯಾಗಿ ದೆಹಲಿಗೆ ಹೋದ ನಂತರ ಗುಜರಾತ್​ನಲ್ಲಿ ಕಾಂಗ್ರೆಸ್​ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಪಾಟೀದಾರ್ ಸಮುದಾಯ ಮತ್ತು ಒಬಿಸಿ ಮೀಸಲು ವಿಚಾರ ಬಿಜೆಪಿ ಮಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮೀಸಲಿಗಾಗಿ ಆಗ್ರಹಿಸುತ್ತಿರುವ ಸಮುದಾಯಗಳ ಯುವ ಮುಖಂಡರು ಕಾಂಗ್ರೆಸ್​ ಕಡೆ ವಾಲಿರುವುದೂ ಕೂಡ ಬಿಜೆಪಿ ಪಾಲಿಗೆ ತಲೆನೋವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ವರ್ಗವು ನಿಜಕ್ಕೂ ಅಸ್ತಿತ್ವದಲ್ಲಿದೆ: ವಿಜ್ಞಾನಿಗಳ ಕೌತುಕದ ಅಧ್ಯಯನ ಬಹಿರಂಗ- ವರದಿಯ ಡಿಟೇಲ್ಸ್​ ಇಲ್ಲಿದೆ
ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ: ವಿಧಿಯಾಟಕ್ಕೆ ಬಲಿಯಾದ ಚಿಕ್ಕೋಡಿಯ ಭೂಮಿಕಾ!