
ಚೆನ್ನೈ[ನ.13]: ರಾಜಕೀಯ ಪ್ರವೇಶದ ಘೋಷಣೆ ಮಾಡಿ ಬಹಳ ದಿನಗಳಾದರೂ ಇನ್ನೂ ಹೊಸ ಪಕ್ಷ ರಚನೆಯ ಕುರಿತು ಯಾವುದೇ ಸುಳಿವು ನೀಡದ ನಟ ರಜನೀಕಾಂತ್, ಸೋಮವಾರ ಇಲ್ಲಿ ಬಿಜೆಪಿಯನ್ನು ಪರೋಕ್ಷವಾಗಿ ಹೊಗಳುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ ವೇಳೆ ಸುದ್ದಿಗಾರರು, ‘2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಮೈತ್ರಿಕೂಟ ರಚಿಸುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗಿ, ಎಲ್ಲಾ ವಿಪಕ್ಷಗಳು ಒಂದಾಗಿ ಹೋರಾಡುವಷ್ಟು ಬಿಜೆಪಿ ಕೆಟ್ಟ ಪಕ್ಷವೇ? ಹಾಗೆ ಅವು ಅಂದುಕೊಳ್ಳುತ್ತಿವೆ ಎಂದಾದಲ್ಲಿ ಅದು ಅವರ ದೃಷ್ಟಿಕೋನವಷ್ಟೇ’ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಹೊಗಳಿದ್ದಾರೆ.
ರಜನಿ ತಮ್ಮದೇ ಪಕ್ಷ ಸ್ಥಾಪಿಸಬಹುದು, ಬಳಿಕ ಚುನಾವಣೆ ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಇಲ್ಲವೇ ನೇರವಾಗಿ ಬಿಜೆಪಿಯನ್ನೇ ಸೇರಬಹುದು ಎಂಬ ಊಹಾಪೋಹಗಳು ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ