ಪರಮಾಣು ಸಂಶೋಧನಾ ನಿರ್ಬಂಧ ತೆರವುಗೊಳಿಸಿದ ಇರಾನ್!

Published : Sep 06, 2019, 03:14 PM ISTUpdated : Sep 06, 2019, 03:24 PM IST
ಪರಮಾಣು ಸಂಶೋಧನಾ ನಿರ್ಬಂಧ ತೆರವುಗೊಳಿಸಿದ ಇರಾನ್!

ಸಾರಾಂಶ

ಪರಮಾಣು ಸಂಶೋಧನಾ ನಿರ್ಬಂಧ ತೆರವುಗೊಳಿಸಿದ ಇರಾನ್| ಅಮೆರಿಕದ ಆರ್ಥಿಕ ನಿರ್ಬಂಧದ ಹೊರತಾಗಿಯೂ ಪರಮಾಣು ಸಂಶೋಧನೆಗೆ ಒತ್ತು| ಪರಮಾಣು ಸಂಶೋಧನಾ ನಿರ್ಬಂಧ ತೆರವುಗೊಳಿಸಿದ ಅಮೆರಿಕ ಅಧ್ಯಕ್ಷ ಹಸನ್ ರೌಹಾನಿ| ಜಂಟಿ ಸಮಗ್ರ ಕ್ರಿಯಾಯೋಜನೆ ಅನ್ವಯ ಪರಮಾಣು ಸಂಶೋಧನಾ ನಿರ್ಬಂಧ ತೆರವು| ಗರಿಗೆದರಿದ ಇರಾನ್ ಪರಮಾಣು ಚಟುವಟಿಕೆಗಳು| 

ಟೆಹ್ರನ್(ಸೆ.06): ಇರಾನ್ ತನ್ನ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವಿಸ್ತರಿಸಲಿದ್ದು, ಈ ಹಿನ್ನೆಲೆಯಲ್ಲಿ ಪರಮಾಣು ಸಂಶೋಧನಾ ನಿರ್ಬಂಧವನ್ನು ಅಧ್ಯಕ್ಷ ಹಸನ್ ರೌಹಾನಿ ತೆರವುಗೊಳಿಸಿದ್ದಾರೆ. 

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರೌಹಾನಿ, 2015 ರ ಪರಮಾಣು ಒಪ್ಪಂದದ ಅನ್ವಯ ದೇಶದ ಮೇಲೆ ಹೇರಲಾಗಿದ್ದ ಪರಮಾಣು ಸಂಶೋಧನಾ ನಿರ್ಬಂಧಗಳನ್ನು ಜಂಟಿ ಸಮಗ್ರ ಕ್ರಿಯಾಯೋಜನೆ ಅನ್ವಯ ಇರಾನ್ ತೆರವುಗೊಳಿಸಲಿದೆ ಎಂದು ಹೇಳಿದ್ದಾರೆ. 

ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಗೆ ಇರಾನ್ ಇದೀಗ ಮುಕ್ತವಾಗಿದ್ದು, ಇರಾನ್ ನ ಪರಮಾಣು ಶಕ್ತಿ ಸಂಘ (ಎಇಒಐ) ದೇಶದ ತಾಂತ್ರಿಕ ಅಗತ್ಯಗಳಿಗೆ ತಕ್ಕಂತೆ ಕೂಡಲೇ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಿದ್ಧವಾಗಿದೆ ಎಂದು ರೌಹಾನಿ ಸ್ಪಷ್ಟಪಡಿಸಿದ್ದಾರೆ. 

ರೌಹಾನೆ ಘೋಷಣೆಯಿಂದಾಗಿ ಇರಾನ್’ನ ಪರಮಾಣು ಚಟುವಟಿಕೆಗಳು ಗರಿಗೆದರಿಲಿದ್ದು, ಇದಕ್ಕೆ ಅಮೆರಿಕ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಕಾದು ನೋಡಬೇಕಿದೆ. ಸದ್ಯ ಇರಾನ್ ಮೇಲೆ ಆರ್ಥಿಕ ನಿರ್ಬಂಧ ಹೇರಿರುವ ಅಮೆರಿಕ, ರೌಹಾನಿಯ ಹೊಸ ಘೋಷಣೆಯಿಂದ ಮತ್ತಷ್ಟು ಕೆರಳುವುದು ನಿಶ್ಚಿತ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ