ಹೀಗೂ ಯಶಸ್ಸನ್ನು ಸಾಧಿಸಬಹುದೆಂದು ತೋರಿಸಿಕೊಟ್ಟ ಭಾರತೀಯರು

Published : May 13, 2017, 08:57 AM ISTUpdated : Apr 11, 2018, 01:12 PM IST
ಹೀಗೂ ಯಶಸ್ಸನ್ನು ಸಾಧಿಸಬಹುದೆಂದು ತೋರಿಸಿಕೊಟ್ಟ ಭಾರತೀಯರು

ಸಾರಾಂಶ

ಔಪಚಾರಿಕ ಶಿಕ್ಷಣ ಅಥವಾ ಪದವಿಗಳನ್ನು ಪಡೆಯದೇ ಜೀವನದಲ್ಲಿ ಸಾಧನೆಗೈದವರಿದ್ದಾರೆ. ಅವರ ಸಾಧನೆಗೆ ಜಗತ್ತೇ ತಲೆಬಾಗಿದೆ.  ಭಾರತದಲ್ಲಿ ಅಂತಹ ಹಲವಾರು ವ್ಯಕ್ತಿತ್ವಗಳನ್ನು ನಾವು ನೋಡುತ್ತೇವೆ.  ಶಾಲಾ ಶಿಕ್ಷಣ ಪೂರೈಸಿ, ಪದವಿ ಪಡೆದು, ಉತ್ತಮ ಅಂಕಗಳನ್ನು ಪಡೆದವರು ಸಾಧನೆ ಮಾಡಬಹುದು, ಮಾಡದೇ ಇರಬಹುದು. ಹಾಗೇನೆ, ಬೇರೆ ಬೇರೆ ರಂಗಳಲ್ಲಿ ಸಾಧನೆ ಮಾಡಿದವರು ಪದವಿಗಳನ್ನು ಅಥವಾ ಉತ್ತಮ ಅಂಕಗಳನ್ನು ಪಡೆದವರೇ ಆಗಬೇಕೆಂದಿಲ್ಲ. ವಿಜ್ಞಾನ-ತಂತ್ರಜ್ಞಾನವಾಗಿರಲಿ, ಕಲೆ, ವಾಣಿಜ್ಯ-ವ್ಯವಹಾರವಾಗಿರಲಿ ಅಥವಾ ರಾಜಕೀಯವಾಗಿರಲಿ ಎಲ್ಲಾ ಕ್ಷೇತ್ರಗಳಲ್ಲಿ ನಮಗೆ ಸಾಧಕರು ಕಾಣಸಿಗುತ್ತಾರೆ. ಕೆಲ ಉದಾಹರಣೆ ಇಲ್ಲಿದೆ..

  • ಅಜೀಮ್ ಪ್ರೇಮ್’ಜಿ: ವಿಪ್ರೋ ಸ್ಥಾಪಕ  ಅಜೀಮ್ ಪ್ರೇಮ್’ಜಿ 21ನೇ ವಯಸ್ಸಿನಲ್ಲಿ ಕಾಲೇಜನ್ನು ಬಿಟ್ಟು ಕಂಪನಿಯನ್ನು ನಡೆಸಲು ಆರಂಭಿಸಿದವರು.
  • ಗೌತಮ್ ಅದಾನಿ: ದೇಶದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ, ವ್ಯಾಪಾರ- ವಹಿವಾಟಿನಲ್ಲಿ ಇದ್ದ ಆಸಕ್ತಿಯಿಂದ  ಪದವಿ ಕೋರ್ಸನ್ನು ಅರ್ಧದಲ್ಲೇ ಮೊಟಕುಗೊಳಿಸಿದವರು.
  • ಕಪಿಲ್ ದೇವ್: ಭಾರತಕ್ಕೆ ವಿಶ್ವಕಪನ್ನು ಗೆದ್ದು ಕೊಟ್ಟ ಕಪಿಲ್ ದೇವ್ ಅರ್ಧದಲ್ಲೇ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಿದವರು
  • ಸಚಿನ್ ತೆಂಡೂಲ್ಕರ್:  ಕೇವಲ ದ್ವಿತೀಯ ಪಿಯುಸಿ ಓದಿರುವ ಸಚಿನ್ ಇಂದು ಜಗತ್ತಿನಾದ್ಯಂತ ಮನೆಮಾತಾಗಿದ್ದಾರೆ.
  • ಆಮಿರ್ ಖಾನ್: ಕೋಟ್ಯಾಂತರ ಜನ ಮನದಲ್ಲಿ ನಟನೆ ಮೂಲಕ ತನ್ನ ಛಾಪನ್ನು ಮೂಡಿಸಿರುವ ಆಮಿರ್ ಖಾನ್ ಓದಿದ್ದು ಬರೇ 12ನೇ ಕ್ಲಾಸ್ ಎಂದರೆ ನಂಬಲೇಬೆಕು. ಬಳಿಕ ತಮ್ಮ ಇಷ್ಟದ ನಟನಾ ರಂಗವನ್ನು ಆರಿಸಿಕೊಂಡವರು.
  • ಐಶ್ವರ್ಯ ರೈ: ತನ್ನ ಆರ್ಕಿಟೆಕ್ಟ್ ಕೋರ್ಸನ್ನು ಅರ್ಧಕ್ಕೆ ಬಿಟ್ಟು ಮಾಡೆಲಿಂಗ್’ನ್ನು ಆರಿಸಿಕೊಂಡು ಇಂದು ಸಿನೆಮಾರಂಗದ ಅತೀ ಪ್ರಮುಖ ನಟಿಗಳಲೊಬ್ಬರು
  • ಮೇರಿ ಕೋಮ್: ಒಲಿಂಪಿಕ್ಸ್’ನಲ್ಲಿ ಭಾರತದ ಹೆಸರನ್ನು ಪ್ರಕಾಶಿಸುವಂತೆ ಮಾಡಿದ  ಬಾಕ್ಸರ್ ಮೇರಿ ಕೋಮ್ ಅರ್ಧದಲ್ಲೇ ಶಾಲೆಯನ್ನು ಬಿಟ್ಟವರು. ಆದರೆ ಇತ್ತೀಚಿನ ವರ್ಷದಲ್ಲಿ ಶಿಕ್ಷಣವನ್ನು ಮುಂದುವರೆಸಿದ್ದಾರೆ.
  • ಸಲ್ಮಾನ್ ಖಾನ್: ಕೇವಲ ಶಾಲಾ ಶಿಕ್ಷಣ ಪೂರೈಸಿ ನಟನೆಯಲ್ಲಿ ತೊಡಗಿಸಿಕೊಂಡವರು.
  • ಅಕ್ಷಯ್ ಕುಮಾರ್: ಪದವಿಯನ್ನು ಅರ್ಧದಲ್ಲೆ ಬಿಟ್ಟು ಸಿನೆಮಾ ರಂಗಕ್ಕೆ ಕಾಲಿಟ್ಟವರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌