
ಬೆಂಗಳೂರು(ಡಿ.02): ನಗರದ ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್)ದಲ್ಲಿ ಇಂದಿನಿಂದ ಇಂದಿರಾ ಕ್ಲಿನಿಕ್ ಕಾರ್ಯಾರಂಭವಾಗಿದ್ದು, ಬಿಬಿಎಂಪಿ ಮಾಡಿದ ಯಡವಟ್ಟಿನಿಂದಾಗಿ ಆರಂಭದಲ್ಲೇ ಸರ್ಕಾರ ಮುಜುಗರಕ್ಕೀಡಾಗಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್'ನ ಮುಂದುವರಿದ ಭಾಗವಾಗಿ ಇಂದು ಮೆಜೆಸ್ಟಿಕ್'ನಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿದ್ದು, ಕ್ಲಿನಿಕ್ ವೇಳಾಪಟ್ಟಿಯಲ್ಲಿ ಯಡವಟ್ಟಾಗಿದೆ. ಇಂಗ್ಲೀಷ್'ನಲ್ಲಿ ಒಂದು ಸಮಯ ನಮೂದಾಗಿದ್ದರೆ, ಕನ್ನಡದಲ್ಲಿ ಮತ್ತೊಂದು ನೀಡಿರುವುದು ಪ್ರಯಾಣಿಕರನ್ನು ಗೊಂದಲಕ್ಕೀಡಾಗುವಂತೆ ಮಾಡಿದೆ.
ಇಂದಿರಾ ಕ್ಲಿನಿಕ್ ವೇಳಾಪಟ್ಟಿ ಸಮಯದ ಕನ್ನಡ ಬೋರ್ಡ್'ನಲ್ಲಿ ಬೆಳಗ್ಗೆ 9 ರಿಂದ 4 ಗಂಟೆ ಎಂದು ನಮೂದಾಗಿದ್ದರೆ, ಇಂಗ್ಲೀಷ್ ವೇಳಾಪಟ್ಟಿಯಲ್ಲಿ ಬೆಳಗ್ಗೆ 10 ರಿಂದ 5 ಗಂಟೆ ಎಂದು ಬರೆಯಲಾಗಿದೆ. ಒಂದೇ ಬೋರ್ಡ್'ನಲ್ಲಿ ಒಂದು ಗಂಟೆ ಸಮಯ ವ್ಯತ್ಯಾಸವಾಗಿರುವುದು ಪ್ರಯಾಣಿಕರಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.