ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ 'ಕರ್ನಾಟಕದ ವಿಕಾಸ ಜೋಡಿ ಯಡಿಯೂರಪ್ಪ ಮೋದಿ,' ಎಂಬ ಹೊಸ ಘೋಷಣೆ.
ಬೆಂಗಳೂರು: ರಾಜ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆ ಮೆಘಾ ಫೈನಲ್ಸ್ಗೆ ಪ್ರಧಾನಿ ಮೋದಿ ಆಗಮಿಸಿದ್ದು, ಇಲ್ಲಿನ ಅರಮನೆ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಹೊಸ ಘೋಷಣೆ ಕೂಗಿದ್ದು, 'ಕರ್ನಾಟಕದ ವಿಕಾಸ ಜೋಡಿ ಯಡಿಯೂರಪ್ಪ ಮೋದಿ,' ಎಂದಿದ್ದಾರೆ.
ಮೋದಿ ವೇದಿಕೆಗೆ ಸ್ವಾಗತಿಸುವ ವೇಳೆ ಯಡಿಯೂರಪ್ಪ ಅವರನ್ನು ಹೊಗಳುವ ಭರದಲ್ಲೊಮ್ಮೆ, 'ಭಾರತದ ಹೆಮ್ಮೆಯ ಪ್ರಧಾನಿ ಯಡಿಯೂರಪ್ಪ...' ಎಂದೂ ಬಾಯಿ ತಪ್ಪಿ ಹೇಳಿದ್ದು, ನಂತರ ಸುಧಾರಿಸಿಕೊಂಡು ತಪ್ಪನ್ನು ಸರಿಪಡಿಸಿಕೊಂಡರು.