
ನವದೆಹಲಿ(ನ. 05): ವಾರದ ಹಿಂದೆ ಪಾಕ್ ಉಗ್ರರು ಭಾರತಕ್ಕೆ ನುಗ್ಗಿ ಮಂದೀಪ್ ಸಿಂಗ್ ಎಂಬ ಸೈನಿಕರ ತಲೆ ಕತ್ತರಿಸಿದ ಘಟನೆ ದೊಡ್ಡ ಸುದ್ದಿ ಮಾಡಿತ್ತು. ಆದರೆ, ಆ ಘಟನೆ ನಡೆದ ಮರುದಿನ ಭಾರತೀಯ ಸೇನೆ ಪಾಕ್ ಗಡಿಭಾಗದಲ್ಲಿ ತೀಕ್ಷ್ಣ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತು. ಅಕ್ಟೋಬರ್ 29ರಂದು ನಡೆದ ಆ ದಾಳಿಯಲ್ಲಿ 40ಕ್ಕೂ ಹೆಚ್ಚು ಪಾಕ್ ಸೈನಿಕರು ಹತ್ಯೆಯಾಗಿದ್ದರು ಎಂದು ನ್ಯೂಸ್18 ವಾಹಿನಿ ವರದಿ ಮಾಡಿದೆ.
ಅ.28ರಂದು ಮಂದೀಪ್ ಸಿಂಗ್'ರ ತಲೆ ಕತ್ತರಿಸಿದ್ದ ಉಗ್ರರಿಗೆ ಸ್ವತಃ ಪಾಕ್ ಸೇನೆಯೇ ಬೆಂಗಾವಲಾಗಿ ನಿಂತಿತ್ತು. ಕಳೆದ ತಿಂಗಳು ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್'ಗೆ ಪ್ರತಿಯಾಗಿ ಪಾಕ್ ಸೇನೆಯು ಈ ರೀತಿಯಾಗಿ ಉಗ್ರರನ್ನು ಛೂ ಬಿಟ್ಟಿತ್ತೆನ್ನಲಾಗಿದೆ. ಆದರೆ, ಯಾವುದೇ ಏಟಿಗೆ ಅದಕ್ಕಿಂತ ಬಲವಾದ ಪ್ರತಿಯೇಟು ನೀಡಲು ಭಾರತ ನಿರ್ಧರಿಸಿರುವುದು ಈ ಘಟನೆಗಳೇ ಸಾಕ್ಷಿಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.