ಮೈಸೂರಿನಲ್ಲಿ ಬಿಜೆಪಿ ಮುಖಂಡ ರವಿ ಮಾಗಳಿ ಅನುಮಾನಾಸ್ಪದ ಸಾವು

Published : Nov 05, 2016, 05:10 AM ISTUpdated : Apr 11, 2018, 12:49 PM IST
ಮೈಸೂರಿನಲ್ಲಿ ಬಿಜೆಪಿ ಮುಖಂಡ ರವಿ ಮಾಗಳಿ ಅನುಮಾನಾಸ್ಪದ ಸಾವು

ಸಾರಾಂಶ

ಬಲಪಂಥೀಯ ಮುಖಂಡರ ಅನುಮಾನಾಸ್ಪದ ಸಾವುಗಳ ಪಟ್ಟಿಗೆ ಈಗ ರವಿ ಮಾಗಲಿಯ ಪ್ರಕರಣವೂ ಸೇರ್ಪಡೆಗೊಂಡಂತಾಗಿದೆ.

ಮೈಸೂರು(ನ. 05): ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರವಿ ಮಾಗಲಿ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಮಾಗಲಿ ಗ್ರಾಮದ ಹೊರವಲಯದ ಕಾಡಿನ ರಸ್ತೆ ಬದಿಯಲ್ಲಿ ರವಿ ಮಾಗಲಿಯವರ ಶವ ಪತ್ತೆಯಾಗಿದೆ. ಅವರ ತಲೆ ಹಾಗೂ ಮುಖಕ್ಕೆ ಗಾಯಗಳಾಗಿವೆ. ಬೈಕ್'ನಲ್ಲಿ ಬರುತ್ತಿದ್ದ ವೇಳೆ ರವಿ ಮಾಗಲಿ ಅಪಘಾತಗೊಂಡಿರಬಹುದೆಂದು ಸದ್ಯ ಪೊಲೀಸರು ಶಂಕಿಸಿದ್ದಾರೆ. ಆದರೆ, ರವಿ ಮಾಗಲಿಯ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.

ನ.10ರಂದು ಟಿಪ್ಪು ಜಯಂತಿ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್'ಪೆಕ್ಟರ್ ಸಿದ್ದಯ್ಯನವರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ರವಿ ಮಾಗಲಿಯವರೂ ಪಾಲ್ಗೊಂಡಿದ್ದರು. ಆ ಸಭೆ ಮುಗಿಸಿಕೊಂಡು ರಾತ್ರಿ 8:30ರ ವೇಳೆ ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನಾದ್ಯಂತ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಲಪಂಥೀಯ ಮುಖಂಡರ ಅನುಮಾನಾಸ್ಪದ ಸಾವುಗಳ ಪಟ್ಟಿಗೆ ಈಗ ರವಿ ಮಾಗಲಿಯ ಪ್ರಕರಣವೂ ಸೇರ್ಪಡೆಗೊಂಡಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದ 2ನೇ ರಾಜಧಾನಿ ಬೆಳಗಾವಿಗೆ ಉತ್ತಮ ಭವಿಷ್ಯ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಲೋಕಸಭೆಯಲ್ಲಿ 2 ರೈತಪರ ಮಸೂದೆ ಮಂಡನೆ: ಸಂಸದ ಡಾ.ಕೆ.ಸುಧಾಕರ್