(ವಿಡಿಯೋ) ಪಾಕ್ ಬಂಕರ್ ಉಡೀಸ್; ಭಾರತೀಯ ಸೇನೆಯ ಪೆಟ್ಟಿಗೆ ಪಾಕ್ ತಬ್ಬಿಬ್ಬು

Published : May 08, 2017, 01:55 AM ISTUpdated : Apr 11, 2018, 01:10 PM IST
(ವಿಡಿಯೋ) ಪಾಕ್ ಬಂಕರ್ ಉಡೀಸ್; ಭಾರತೀಯ ಸೇನೆಯ ಪೆಟ್ಟಿಗೆ ಪಾಕ್ ತಬ್ಬಿಬ್ಬು

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿ ಹರಡುತ್ತಿದೆ. ಭಾರತೀಯ ಸೇನೆ ಈ ವಿಡಿಯೋವನ್ನು ದೃಢಪಡಿಸಿಲ್ಲ. ಆದರೆ, ಕಳೆದ ತಿಂಗಳು ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಪಾಕಿಸ್ತಾನೀಯರು ಭಾರತದ ಇಬ್ಬರು ಯೋಧರ ಶಿರಚ್ಛೇದನ ಮಾಡಿದ ಘಟನೆಗೆ ಮುನ್ನ ಈ ದಾಳಿ ನಡೆದಿರುಬಹುದೆನ್ನಲಾಗಿದೆ. ಇದು ನಿಜವೇ ಆಗಿದ್ದರೆ, ಬಂಕರ್ ನಾಶಕ್ಕೆ ಪ್ರತೀಕಾರವಾಗಿ ಪಾಕಿಸ್ತಾನೀಯರು ಭಾರತೀಯ ಯೋಧರ ತಲೆಕಡಿದಿರಬಹುದು.

ನವದೆಹಲಿ(ಮೇ 08): ಪಾಕಿಸ್ತಾನವು ಪದೇಪದೇ ಕಾಲು ಕೆರೆದುಕೊಂಡು ಕದನವಿರಾಮ ಉಲ್ಲಂಘಿಸುತ್ತಿದ್ದರೂ ಭಾರತ ಮೌನವಹಿಸಿಕೊಂಡಿರುತ್ತದೆ ಎಂಬ ಆರೋಪ ಸಾಕಷ್ಟು ಕೇಳಿಬರುತ್ತದೆ. ಆದರೆ, ಭಾರತೀಯ ಸೇನೆ ಸುಮ್ಮನೆ ಕೈಚೆಲ್ಲಿ ಕೂರೋದಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಬಂಕರ್'ವೊಂದನ್ನು ನಾಶಪಡಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಭಾರತೀಯ ಸೇನೆಯ ಆ್ಯಂಟಿ-ಟ್ಯಾಂಕ್ ಕ್ಷಿಪಣಿಗಳು ಪಾಕ್ ಬಂಕರ್'ನ್ನು ಉಡೀಸ್ ಮಾಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿ ಹರಡುತ್ತಿದೆ. ಭಾರತೀಯ ಸೇನೆ ಈ ವಿಡಿಯೋವನ್ನು ದೃಢಪಡಿಸಿಲ್ಲ. ಆದರೆ, ಕಳೆದ ತಿಂಗಳು ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಪಾಕಿಸ್ತಾನೀಯರು ಭಾರತದ ಇಬ್ಬರು ಯೋಧರ ಶಿರಚ್ಛೇದನ ಮಾಡಿದ ಘಟನೆಗೆ ಮುನ್ನ ಈ ದಾಳಿ ನಡೆದಿರುಬಹುದೆನ್ನಲಾಗಿದೆ. ಇದು ನಿಜವೇ ಆಗಿದ್ದರೆ, ಬಂಕರ್ ನಾಶಕ್ಕೆ ಪ್ರತೀಕಾರವಾಗಿ ಪಾಕಿಸ್ತಾನೀಯರು ಭಾರತೀಯ ಯೋಧರ ತಲೆಕಡಿದಿರಬಹುದು.

ಏನಿದು ಬಂಕರ್?
ಸೇನೆಯ ಬಂಕರ್'ನಲ್ಲಿ ಇಂಧನ ಮೊದಲಾದವನ್ನು ಸಂಗ್ರಹಿಸಿಡಲಾಗಿರುತ್ತದೆ. ಯೋಧರಿಗೆ ಬೇಕಾದ ಬಹುಮುಖ್ಯ ವಸ್ತುಗಳು, ಪರಿಕರಗಳು ಈ ಬಂಕರ್'ನಲ್ಲಿರುತ್ತವೆ. ಇವು ಒಂದು ರೀತಿಯಲ್ಲಿ ಸೇನಾ ಉಗ್ರಾಣದಂತೆ ಕಾರ್ಯನಿರ್ವಹಿಸುತ್ತದೆ. ಬಾಂಬ್ ಮೊದಲಾದವುಗಳಿಂದ ರಕ್ಷಿಸಲು ಈ ಬಂಕರ್'ಗಳನ್ನ ಅಂಡರ್'ಗ್ರೌಂಡ್'ನಲ್ಲಿ ನಿರ್ಮಿಸಲಾಗಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ