ಮೇರೆ ಪ್ಯಾರೆ ದೇಶ್ ವಾಸಿಯೋ ಜೋಕ್ ಬಗ್ಗೆ ಮೋದಿ ಹೇಳೋದೇನು?

Published : Sep 26, 2017, 05:29 PM ISTUpdated : Apr 11, 2018, 01:13 PM IST
ಮೇರೆ ಪ್ಯಾರೆ ದೇಶ್ ವಾಸಿಯೋ ಜೋಕ್ ಬಗ್ಗೆ ಮೋದಿ ಹೇಳೋದೇನು?

ಸಾರಾಂಶ

ಸಂಜೆ ಭಾಷಣ ಮಾಡುವಾಗ ತಮ್ಮ ಮೇರೆ ಪ್ಯಾರೆ ದೇಶ ವಾಸಿಯೋ ಎಂಬ ಸಂಬೋಧನೆ ಎನ್ನುವುದು ಹೇಗೆ ಹಾಸ್ಯಕ್ಕೆ ಒಳಗಾಗಿದೆ ಎನ್ನುವುದು ಗೊತ್ತಿದೆ ಎಂದು ಜೋರಾಗಿ ನಕ್ಕರು ಮೋದಿ. ಆದರೆ, ಮಾಡಬೇಕಾದ ಕೆಲಸವನ್ನು ಮಾಡಿಯೇ ಮಾಡುತ್ತೇನೆ. ನನ್ನ ಕಪ್ಪು ಹಣದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹೇಳಿದಾಗ ಸಭೆಯಲ್ಲಿ ನಿಶ್ಯಬ್ದ ಮೌನವಿತ್ತು.

ದೆಹಲಿಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬೆಳಿಗ್ಗೆ 10:30ಕ್ಕೆ ಒಳಗಡೆ ಬಂದ ಪ್ರಧಾನಿ ನರೇಂದ್ರ ಮೋದಿ ಸಂಜೆ ತಮ್ಮ ಭಾಷಣದ ಸರದಿ ಬರುವವರೆಗೂ ಕುಳಿತೇ ಇದ್ದರು. ಸ್ವಯಂ ಮೋದಿ ಸಾಹೇಬರೇ ಅಲ್ಲಿ ಕುಳಿತ ಮೇಲೆ ಬೇರೆ ನಾಯಕರು ಬೇರೆ ದಾರಿಯಿಲ್ಲದೆ ಅಲ್ಲಿಯೇ ಇರಬೇಕಾಯಿತು. ಸಂಜೆ ಭಾಷಣ ಮಾಡುವಾಗ ತಮ್ಮ ಮೇರೆ ಪ್ಯಾರೆ ದೇಶ ವಾಸಿಯೋ ಎಂಬ ಸಂಬೋಧನೆ ಎನ್ನುವುದು ಹೇಗೆ ಹಾಸ್ಯಕ್ಕೆ ಒಳಗಾಗಿದೆ ಎನ್ನುವುದು ಗೊತ್ತಿದೆ ಎಂದು ಜೋರಾಗಿ ನಕ್ಕರು ಮೋದಿ. ಆದರೆ, ಮಾಡಬೇಕಾದ ಕೆಲಸವನ್ನು ಮಾಡಿಯೇ ಮಾಡುತ್ತೇನೆ. ನನ್ನ ಕಪ್ಪು ಹಣದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹೇಳಿದಾಗ ಸಭೆಯಲ್ಲಿ ನಿಶ್ಯಬ್ದ ಮೌನವಿತ್ತು. ಅಂದಹಾಗೆ ಮೋದಿ ನವರಾತ್ರಿಯಲ್ಲಿ ಉಪವಾಸವಿರುತ್ತಾರೆ. ಒಂಭತ್ತೂ ದಿನ ಕೇವಲ ನಿಂಬೆಹಣ್ಣು ಹಾಗೂ ಬಿಸಿನೀರು ಸೇವಿಸಿಕೊಂಡಿರುತ್ತಾರೆ.

ಕಾರ್ಯಕರ್ತ ಯೋಗಿ:
ಬಿಜೆಪಿ ಕಾರ್ಯಕಾರಿಣಿ ಸಭೆಯ ವೇದಿಕೆಯಲ್ಲಿ ಭಾಷಣಕ್ಕಾಗಿ ಇಟ್ಟಿದ್ದ ಪೋಡಿಯಮ್ ಮೇಲೆ ಅಂಟಿಸಿದ್ದ ಪಂಡಿತ್ ದೀನದಯಾಳ್ ಅವರ ಭಾವಚಿತ್ರ ಬೀಳುತ್ತಿತ್ತು. 4-5 ಬಾರಿ ತಾನೇ ಕೆಳಗೆ ಕುಳಿತು ಆ ಭಾವ ಚಿತ್ರವನ್ನು ಸರಿಯಾಗಿ ಅಂಟಿಸುತ್ತಿದ್ದರು ದೇಶದ ಅತ್ಯಂತ ದೊಡ್ಡ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಅಂದಹಾಗೆ, ಇಡೀ ದಿನದ ಕಾರ್ಯಕಾರಿಣಿಯಲ್ಲಿ ದೇಶದೆಲ್ಲೆಡೆಯಿಂದ ಬಂದಿದ್ದ ಬಿಜೆಪಿ ನಾಯಕರು ಸೆಲ್ಫಿಗಾಗಿ ಅತೀ ಹೆಚ್ಚು ಬೆನ್ನು ಹತ್ತಿದ್ದು ಯೋಗಿಯನ್ನು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌