ನಿರ್ಮಲಾ ಸೀತಾರಾಮನ್ ರಕ್ಷಣಾ ಮಂತ್ರಿಯಾಗುವ ವಿಚಾರ ಅಮಿತ್ ಶಾಗೂ ಗೊತ್ತಿರಲಿಲ್ಲವೇ?

Published : Sep 26, 2017, 05:13 PM ISTUpdated : Apr 11, 2018, 12:57 PM IST
ನಿರ್ಮಲಾ ಸೀತಾರಾಮನ್ ರಕ್ಷಣಾ ಮಂತ್ರಿಯಾಗುವ ವಿಚಾರ ಅಮಿತ್ ಶಾಗೂ ಗೊತ್ತಿರಲಿಲ್ಲವೇ?

ಸಾರಾಂಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೂ ಕೂಡ ಗೊತ್ತಿರಲಿಲ್ಲ ಎನ್ನುತ್ತಿವೆ ಬಿಜೆಪಿ ಮೂಲಗಳು. ವಿಷಯ ಏನಪ್ಪಾ ಎಂದರೆ ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರಾಜನಾಥ್ ಸಿಂಗ್ ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಅಮಿತ್ ಶಾ ಬಳಿ ಅವರಿಗೆ ಯಾವ ಖಾತೆ ಎಂದು ಕೇಳಿದ್ದಾರೆ. ಆಗ ಶಾ ನಗರಾಭಿವೃದ್ಧಿ ಖಾತೆ ಎಂದು ಹೇಳಿದರಂತೆ. ಆದರೆ ಸಂಜೆ ನೋಡುವಾಗ ನಿರ್ಮಲಾ ರಕ್ಷಣಾ ಸಚಿವರಾಗಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೂ ಕೂಡ ಗೊತ್ತಿರಲಿಲ್ಲ ಎನ್ನುತ್ತಿವೆ ಬಿಜೆಪಿ ಮೂಲಗಳು. ವಿಷಯ ಏನಪ್ಪಾ ಎಂದರೆ ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರಾಜನಾಥ್ ಸಿಂಗ್ ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಅಮಿತ್ ಶಾ ಬಳಿ ಅವರಿಗೆ ಯಾವ ಖಾತೆ ಎಂದು ಕೇಳಿದ್ದಾರೆ. ಆಗ ಶಾ ನಗರಾಭಿವೃದ್ಧಿ ಖಾತೆ ಎಂದು ಹೇಳಿದರಂತೆ. ಆದರೆ ಸಂಜೆ ನೋಡುವಾಗ ನಿರ್ಮಲಾ ರಕ್ಷಣಾ ಸಚಿವರಾಗಿದ್ದರು. ಬಿಜೆಪಿ ಮೂಲಗಳ ಪ್ರಕಾರ ಅಮಿತ್ ಶಾ ಅವರು ರಾಜನಾಥ್‌'ರಂತಹ ಸೀನಿಯರ್ ನಾಯಕರ ಬಳಿ ಹಾಗೆಯೇ ಏನೋ ಹೇಳಿರಲಕ್ಕಿಲ್ಲ. ಆದರೆ ನಿರ್ಮಲಾಗೆ ರಕ್ಷಣಾ ಖಾತೆ ಕೊಟ್ಟಿರುವುದು ಬಿಜೆಪಿ ನಾಯಕರಿಗೆ ತೀರಾ ಇರಿಸುಮುರುಸು ಆಗಿದ್ದು, ನಿತಿನ್ ಗಡ್ಕರಿ ಅಂತೂ ಇದು ಸರಿಯಾಗಲಿಲ್ಲ ಎಂದು ನೇರವಾಗಿಯೇ ಸಂಘದ ನಾಯಕರ ಬಳಿ ಹೇಳಿಕೊಂಡಿದ್ದಾರೆ.

ಸಾಲು ಸಾಲು ವಕೀಲರು:
ಕಳೆದ ವಾರ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರ ಪ್ರಕರಣ ಸುಪ್ರೀಂಕೋರ್ಟ್‌'ನಲ್ಲಿ ವಿಚಾರಣೆಗೆ ಬಂದಾಗ ನಿರಾಶ್ರಿತರ ಪರವಾಗಿ ವಾದಿಸಲು ಸಾಲು ಸಾಲು ವಕೀಲರ ದಂಡೇ ಸುಪ್ರೀಂಕೋರ್ಟ್‌'ನಲ್ಲಿ ನೆರೆದಿತ್ತು. ಫಾಲಿ ನಾರಿಮನ್, ಕಪಿಲ್ ಸಿಬಲ್, ರಾಜೀವ್ ಧವನ್, ಪ್ರಶಾಂತ್ ಭೂಷಣ್ ಸೇರಿದಂತೆ ದೇಶದ ಖ್ಯಾತನಾಮ ವಕೀಲರು ನಿರಾಶ್ರಿತರ ಹಕ್ಕುಗಳ ವಾದ ಮಂಡನೆಗಾಗಿ ನ್ಯಾಯಪೀಠದ ಎದುರು ನಿಂತಿದ್ದರು. ಅಂದ ಹಾಗೆ ಮೇಲೆ ಹೆಸರಿಸಿದ ಸುಪ್ರೀಂಕೋರ್ಟ್‌'ನ ಹಿರಿಯ ವಕೀಲರು ಒಮ್ಮೆ ಕೋರ್ಟ್‌'ನಲ್ಲಿ ವಾದಿಸಲು ಒಂದು ದಿನಕ್ಕೆ 5ರಿಂದ 7 ಲಕ್ಷ ರು. ಮುಂಗಡ ಫೀಸ್ ಪಡೆಯುತ್ತಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ