
ನಿನ್ನೆ ಸಂಜೆ ಫಾಲಿ ನಾರಿಮನ್ ಅವರನ್ನು ಭೇಟಿಯಾಗಲು ಕರ್ನಾಟಕ ಭವನದಿಂದ ಹೊರಗೆ ಹೊರಟಿದ್ದ ಎಂಬಿ ಪಾಟೀಲರಿಗೆ ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಸಿ ವಾಪಸ್ ಬರುತ್ತಿದ್ದ ಸೋಮಣ್ಣ ಹಾಗೂ ಬಸವರಾಜ್ ಬೊಮ್ಮಾಯಿ ಸಿಕ್ಕರು. ಸೋಮಣ್ಣ ಎದುರಿಗಿದ್ದರೂ ಮಾತನಾಡಿಸದ ಪಾಟೀಲರು ಬೊಮ್ಮಾಯಿ ಅವರಿಗೆ ಮಾತ್ರ ಬರ್ರೀ ನಾರಿಮನ್ ಕಡೆ ಹೋಗೋಣ ಎಂದು ಹೇಳಿದರು. ಬೊಮ್ಮಾಯಿ ಇಲ್ಲ ಇಲ್ಲ ಎಂದಾಗ ಪಕ್ಕದಲ್ಲಿಯೇ ಇದ್ದ ಬಿಜೆಪಿ ನಾಯಕರೊಬ್ಬರು ಎಲ್ಲವೂ ಸರಿಯಾದರೆ ಮುಂದಿನ ಜೂನ್ ನಂತರ ಬೊಮ್ಮಾಯಿ ಅವರೇ ಜಲ ಸಂಪನ್ಮೂಲ ಸಚಿವರಾಗಿ ನಾರಿಮನ್ ಭೇಟಿಗೆ ಹೋಗುತ್ತಾರೆ ಎಂದರು. ಆಗ ಪಾಟೀಲರು ಜೋರಾಗಿ ಇಲ್ಲ ಇಲ್ಲ ಸಾಧ್ಯವೇ ಇಲ್ಲ, ನಾವೇ ಗೆಲ್ಲೋದು ಎನ್ನಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಬೊಮ್ಮಾಯಿ ಏನೋ ಹೇಳಲಾರಂಭಿಸಿದರು. ಒಂದು ರೀತಿಯಲ್ಲಿ ವಾದ ಪ್ರತಿವಾದ ಜೋರಾಗಿ ಆರಂಭವಾದಂತೆ ಕೇಳಿಸತೊಡಗಿತು. ಕೊನೆಗೆ ಲಕ್ಷ್ಮಣ್ ಸವದಿ ಏನೋ ಜೋಕ್ ಹೇಳಿದ ನಂತರ ಬೊಮ್ಮಾಯಿ ಪಾಟೀಲರನ್ನು ಅಪ್ಪಿಕೊಂಡು ಬೀಳ್ಕೊಟ್ಟರು. ಜೊತೆಗೆ ಮಾತುಮಾತಿಗೆ ರೈಸ್ ಆಗಬೇಡ್ರಿ ಎಂದು ಎಷ್ಟು ಸಲ ಹೇಳಿದ್ದೇನೆ ಎಂದು ಕೂಡ ಚುಚ್ಚಿದರು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.