ನೀನ್ಯಾವನೋ ಬಿಗ್ ಬಾಸ್? ದಿಲ್ಲಿಯಲ್ಲಿ ಗೌಡರ ಮಾತಿಗೆ ಬೆಪ್ಪಾದ ಒಳ್ಳೆ ಹುಡ್ಗ ಪ್ರಥಮ್; ಇಂಡಿಯಾ ಗೇಟ್ ಇನ್'ಸೈಡ್ ಸ್ಟೋರಿ

Published : Aug 29, 2017, 05:18 PM ISTUpdated : Apr 11, 2018, 12:40 PM IST
ನೀನ್ಯಾವನೋ ಬಿಗ್ ಬಾಸ್? ದಿಲ್ಲಿಯಲ್ಲಿ ಗೌಡರ ಮಾತಿಗೆ ಬೆಪ್ಪಾದ ಒಳ್ಳೆ ಹುಡ್ಗ ಪ್ರಥಮ್; ಇಂಡಿಯಾ ಗೇಟ್ ಇನ್'ಸೈಡ್ ಸ್ಟೋರಿ

ಸಾರಾಂಶ

* ದಿಲ್ಲಿಯ ಅನಂತಕುಮಾರ್ ಕಚೇರಿಯಲ್ಲಿ ಪೆಚ್ಚಾಗಿ ಕೂತ ಬಿಗ್ ಬಾಸ್ ಪ್ರಥಮ್ * ನೀನ್ಯಾವನೋ ಬಿಗ್ ಬಾಸ್? ನಾನು ಬಿಗ್ ಬಾಸ್ ಎಂದು ಆವಾಜ್ ಹಾಕಿದ ಹರಿಷ್ಚಂದ್ರ ಗೌಡರು * ಅಪ್ಪ ಮಗ ಇಬ್ಬರೂ ಚುನಾವಣೆಗೆ ನಿಲ್ಲುತ್ತೇವೆ ಎಂದು ರಾಹುಲ್ ಗಾಂಧಿಗೆ ತಿಳಿಸಿದ ಸಿದ್ದರಾಮಯ್ಯ

ಬಿಗ್ ಬಾಸ್ ಮನೆಯಲ್ಲಿ ಕಳೆದ ವರ್ಷ ಪ್ರಥಮ್ ಆಡಿದ್ದೇ ಆಟ. ಕಳೆದ ವಾರ ದೆಹಲಿಗೆ ಬಂದಿದ್ದ ಪ್ರಥಮ್ ಸಂಸತ್ ಭವನದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ಕಚೇರಿಯ ಅತಿಥಿಗಳು ಕೂರುವ ಕೋಣೆಯಲ್ಲಿ ತಬ್ಬಿಬ್ಬಾಗಿ ಕೂತಿದ್ದರು. ಏಕೆಂದರೆ, ಅಲ್ಲಿಗೆ ಪ್ರಥಮ್ ಬಂದಾಕ್ಷಣ ಮಂತ್ರಪುಷ್ಪ ಶುರುಮಾಡಿದ ಟಿಡಿಆರ್ ಹರಿಶ್ಚಂದ್ರ ಗೌಡರು, ನೀನ್ಯಾವನೋ ಬಿಗ್ ಬಾಸ್? ನಾನು ಬಿಗ್ ಬಾಸ್. ನನ್ನ ಕೈಯಲ್ಲಿ ಅಧಿಕಾರ ಕೊಡಲಿ. ಹಿಟ್ಲರ್ ಹಿಟ್ಲರ್ ನಾನು... ಎನ್ನುತ್ತಿದ್ದರೆ ಪ್ರಥಮ್ ಸುಸ್ತೋ ಸುಸ್ತು.

ಅಪ್ಪ ಮಗ ಇಬ್ಬರೂ ನಿಲ್ಲುತ್ತೇವೆ:
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ನನ್ನ ಮಗನಿಗೆ ಟಿಕೆಟ್ ಕೊಡಿ, ನಾನು ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಬರುವಾಗ ರಾಹುಲ್ ಗಾಂಧಿ ಬಳಿ ವಿಷಯ ಪ್ರಸ್ತಾಪಿಸಿದ್ದು, ರಾಹುಲ್ ನೋಡೋಣ ಇನ್ನೂ ಟೈಂ ಇದೆಯಲ್ವಾ ಎಂದು ಹೇಳಿದರಂತೆ.

- ಪ್ರಶಾಂತ್ ನಾತು, ಸುವರ್ಣನ್ಯೂಸ್, ದೆಹಲಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!