ನೀನ್ಯಾವನೋ ಬಿಗ್ ಬಾಸ್? ದಿಲ್ಲಿಯಲ್ಲಿ ಗೌಡರ ಮಾತಿಗೆ ಬೆಪ್ಪಾದ ಒಳ್ಳೆ ಹುಡ್ಗ ಪ್ರಥಮ್; ಇಂಡಿಯಾ ಗೇಟ್ ಇನ್'ಸೈಡ್ ಸ್ಟೋರಿ

By Suvarna Web DeskFirst Published Aug 29, 2017, 5:18 PM IST
Highlights

* ದಿಲ್ಲಿಯ ಅನಂತಕುಮಾರ್ ಕಚೇರಿಯಲ್ಲಿ ಪೆಚ್ಚಾಗಿ ಕೂತ ಬಿಗ್ ಬಾಸ್ ಪ್ರಥಮ್

* ನೀನ್ಯಾವನೋ ಬಿಗ್ ಬಾಸ್? ನಾನು ಬಿಗ್ ಬಾಸ್ ಎಂದು ಆವಾಜ್ ಹಾಕಿದ ಹರಿಷ್ಚಂದ್ರ ಗೌಡರು

* ಅಪ್ಪ ಮಗ ಇಬ್ಬರೂ ಚುನಾವಣೆಗೆ ನಿಲ್ಲುತ್ತೇವೆ ಎಂದು ರಾಹುಲ್ ಗಾಂಧಿಗೆ ತಿಳಿಸಿದ ಸಿದ್ದರಾಮಯ್ಯ

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಬಿಗ್ ಬಾಸ್ ಮನೆಯಲ್ಲಿ ಕಳೆದ ವರ್ಷ ಪ್ರಥಮ್ ಆಡಿದ್ದೇ ಆಟ. ಕಳೆದ ವಾರ ದೆಹಲಿಗೆ ಬಂದಿದ್ದ ಪ್ರಥಮ್ ಸಂಸತ್ ಭವನದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ಕಚೇರಿಯ ಅತಿಥಿಗಳು ಕೂರುವ ಕೋಣೆಯಲ್ಲಿ ತಬ್ಬಿಬ್ಬಾಗಿ ಕೂತಿದ್ದರು. ಏಕೆಂದರೆ, ಅಲ್ಲಿಗೆ ಪ್ರಥಮ್ ಬಂದಾಕ್ಷಣ ಮಂತ್ರಪುಷ್ಪ ಶುರುಮಾಡಿದ ಟಿಡಿಆರ್ ಹರಿಶ್ಚಂದ್ರ ಗೌಡರು, ನೀನ್ಯಾವನೋ ಬಿಗ್ ಬಾಸ್? ನಾನು ಬಿಗ್ ಬಾಸ್. ನನ್ನ ಕೈಯಲ್ಲಿ ಅಧಿಕಾರ ಕೊಡಲಿ. ಹಿಟ್ಲರ್ ಹಿಟ್ಲರ್ ನಾನು... ಎನ್ನುತ್ತಿದ್ದರೆ ಪ್ರಥಮ್ ಸುಸ್ತೋ ಸುಸ್ತು.

Latest Videos

ಅಪ್ಪ ಮಗ ಇಬ್ಬರೂ ನಿಲ್ಲುತ್ತೇವೆ:
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ನನ್ನ ಮಗನಿಗೆ ಟಿಕೆಟ್ ಕೊಡಿ, ನಾನು ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಬರುವಾಗ ರಾಹುಲ್ ಗಾಂಧಿ ಬಳಿ ವಿಷಯ ಪ್ರಸ್ತಾಪಿಸಿದ್ದು, ರಾಹುಲ್ ನೋಡೋಣ ಇನ್ನೂ ಟೈಂ ಇದೆಯಲ್ವಾ ಎಂದು ಹೇಳಿದರಂತೆ.

- ಪ್ರಶಾಂತ್ ನಾತು, ಸುವರ್ಣನ್ಯೂಸ್, ದೆಹಲಿ

click me!