ಬರಲಿದೆ ದೇಶದ ಮೊತ್ತಮೊದಲ ಖಾಸಗಿ ರೈಲ್ವೇ ಸ್ಟೇಶನ್

Published : Jun 07, 2017, 04:23 PM ISTUpdated : Apr 11, 2018, 01:08 PM IST
ಬರಲಿದೆ ದೇಶದ ಮೊತ್ತಮೊದಲ ಖಾಸಗಿ ರೈಲ್ವೇ ಸ್ಟೇಶನ್

ಸಾರಾಂಶ

ಸಾರ್ವಜನಿಕ & ಖಾಸಗಿ ಸಹಭಾಗಿತ್ವದಲ್ಲಿ (PPP). ಮಧ್ಯಪ್ರದೇಶದ ಭೋಪಾಲ್’ನ ಹೊರವಲಯದಲ್ಲಿರುವ ಹಬೀಬ್’ಗಂಜ್ ರೈಲ್ವೇ ಸ್ಟೇಶನನ್ನು ಪುನರ್ನವೀಕರಣ ಮಾಡಲಾಗುತ್ತಿದೆ. ಈ ಖಾಸಗಿ ರೈಲ್ವೇ ಸ್ಟೇಶನ್’ನಲ್ಲಿ ವಾಣಿಜ್ಯ ಸಂಕೀರ್ಣಗಳು, ಕಚೇರಿಗಳು, 5 ಸ್ಟಾರ್ ಹೋಟೆಲ್ ಹಾಗೂ ಮತ್ತಿತರ ಸೌಲಭ್ಯಗಳು ಲಭ್ಯವಾಗಲಿವೆ.

ಭೋಪಾಲ್: ಯೋಜನೆಯಂತೆ ಎಲ್ಲವೂ ಸುಗಮವಾಗಿ ನಡೆದರೆ ಮುಂದಿನ ಮೂರು ವರ್ಷಗಳಲ್ಲಿ ದೇಶದ ಮೊಟ್ಟಮೊದಲ ಖಾಸಗಿ ರೈಲ್ವೇ ಸ್ಟೇಶನ್ ಸಿದ್ಧವಾಗಲಿದೆ. ಸಾರ್ವಜನಿಕ & ಖಾಸಗಿ ಸಹಭಾಗಿತ್ವದಲ್ಲಿ (PPP). ಮಧ್ಯಪ್ರದೇಶದ ಭೋಪಾಲ್’ನ ಹೊರವಲಯದಲ್ಲಿರುವ ಹಬೀಬ್’ಗಂಜ್ ರೈಲ್ವೇ ಸ್ಟೇಶನನ್ನು ಪುನರ್ನವೀಕರಣ ಮಾಡಲಾಗುತ್ತಿದೆ.

ಈ ಖಾಸಗಿ ರೈಲ್ವೇ ಸ್ಟೇಶನ್’ನಲ್ಲಿ ವಾಣಿಜ್ಯ ಸಂಕೀರ್ಣಗಳು, ಕಚೇರಿಗಳು, 5 ಸ್ಟಾರ್ ಹೋಟೆಲ್ ಹಾಗೂ ಮತ್ತಿತರ ಸೌಲಭ್ಯಗಳು ಲಭ್ಯವಾಗಲಿವೆ. ಸ್ಟೇಶನ್’ನ ನಿರ್ವಹಣೆಯನ್ನು 8 ವರ್ಷಗಳ ಅವಧಿಗೆ ಬನ್ಸಲ್ ಎಂಬ ಸಂಸ್ಥೆಗೆ ವಹಿಸಲಾಗಿದ್ದು, 45 ವರ್ಷಗಳ ಮಟ್ಟಿಗೆ ಜಮೀನನ್ನು ಭೋಗ್ಯಕ್ಕೆ ನೀಡಲಾಗಿದೆ.

1979ರಲ್ಲಿ ಆರಂಭಿಸಲಾದ ಈ ಸ್ಟೇಶನ್’ನ ಅಭಿವೃದ್ಧಿಗೆ ಬನ್ಸಲ್ ಗ್ರೂಪ್ ರೂ.100 ಕೋಟಿ, ಹಾಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ರೂ.350 ಕೋಟಿ ಹಣ ಹೂಡಲಿದೆ ಎಂದು ಹೇಳಲಾಗಿದೆ.  

ರೈಲು ನಿಲ್ದಾಣವನ್ನು ವಿಶ್ವದರ್ಜೆ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಲ್ಲದೇ,  ಮರು ನಿರ್ಮಾಣದ ಎರಡನೇ ಹಂತದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 5-ಸ್ಟಾರ್ ಹೋಟೆಲ್ ಕೂಡಾ ನಿರ್ಮಾಣವಾಗಲಿದೆ. ರೈಲು ನಿಲ್ದಾಣದಲ್ಲಿ ಎಲ್ಲಾ ಆಧುನಿಕ ಸೌಕರ್ಯಗಳೊಂದಿಗೆ, ಆಗಮಿಸುವ ಹಾಗೂ ಹೊರಡುವ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆಗಳಿರುವಂತೆ ವಿನ್ಯಾಸಗೊಳಿಸಲಾಗಿದೆ,

ರೈಲ್ವೇ ಸ್ಟೇಶನ್’ನಲ್ಲಿ 6 ಲಿಫ್ಟ್’ಗಳು, 11 ಎಸ್ಕಲೇಟರ್’ಗಳು, 3 ಟ್ರಾವಲೇಟರ್’ಗಳು, 2 ಅಂಡರ್’ಪಾಸ್’ಗಳಳಿರುವುವು. ಹಾಗೂ 300 ಕಾರುಗಳು, 850 ದ್ವಿಚಕ್ರವಾಹನಗಳಿಗೆ ಪಾರಕಿಂಗ್ ವ್ಯವಸ್ಥೆಯಿರುವುದು.

ಮಾ.1, 2017ರಿಂದ ಸ್ಟೇಶನ್’ನ ನಿರ್ವಹಣೆಯನ್ನು ಬನ್ಸಲ್ ಸಂಸ್ಥೆಗೆ ವಹಿಸಲಾಗಿದೆ.ಸ್ಟೇಶನ್’ನ ಫುಡ್ ಸ್ಟಾಲ್’ಗಳು, ವಿಶ್ರಾಂತಿ ಕೊಠಡಿಗಳು, ವಿದ್ಯುತ್ ವ್ಯವಸ್ಥೆ, ಹಾಗೂ ಪ್ಲಾಟ್’ಫಾರ್ಮಗಳನ್ನು ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಸ್ಥೆಯೇ ನಿರ್ವಹಿಸುತ್ತಿದೆ.  ಮುಂಬರುವ ಜೂ.9ರಂದು ಈ ಪ್ರಾಜೆಕ್ಟ್’ಗೆ ರೈಲ್ವೇ ಸಚಿವ ಸುರೇಶ್ ಪ್ರಭು ಶಿಲಾನ್ಯಾಸ ಮಾಡಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ನೀವು ಕರಾವಳಿಯವರು ಬೆಂಕಿ ಹಚ್ಚೋರು'- ಸಚಿವ ಬೈರತಿ ಸುರೇಶ್; ಶಾಸಕ ಸುನೀಲ್ ಕುಮಾರ್ ಆಕ್ರೋಶ
ಚಾಮರಾಜನಗರ: ಕೂಲಿ ಕೆಲಸ ಮುಗಿಸಿ ವಾಪಾಸ್ ಹೋಗುವ ವೇಳೆ ಕಾಡಾನೆ ದಾಳಿ; ವ್ಯಕ್ತಿ ದುರ್ಮರಣ