
ಕೇರಳ(ಜೂ.07): ಕೇರಳ ರಾಜ್ಯದ ಸಚಿವ ಸಿಪಿಐ ಶಾಸಕ ಗೀತ ಗೋಪಿ ಎಂಬವರ ಮಗಳ ಮದುವೆ ಸ್ಯ ಚರ್ಚೆಯಲ್ಲಿದ್ದು, ಮಗಳ ಮದುವೆಯ ಫೋಟೋ ಒಂದು ಸಾಮಾಜಿ ಜಾಲಾತಾನಗಳಲ್ಲಿ ವೈರಲ್ ಆಗಿದೆ. ಈ ಮದುವೆಯ ಫೋಟೋದಲ್ಲಿ ಮದುಮಗಳೂ ಮೇಲಿಂದ ಕೆಳಗಿನವರೆಗೂ ಚಿನ್ನದಲ್ಲೇ ಸಿಂಗರಿಸಿಕೊಂಡಿರುವುದೇ ವಿವಾದಕ್ಕೆ ಕಾರಣವಾಗಿದೆ.
ವಾಸ್ತವವಾಗಿ ಸಿಪಿಐ ಪಕ್ಷದ ನಾಯಕ ಹಾಗೂ ಕೇರಳದ ಮಾಜಿ ಕೃಪಿ ಮಂತ್ರಿ ಮುಲ್ಲಾಕಾರ ರತ್ನಾಕರ ಏಪ್ರಿಲ್'ಲ್ನಷ್ಟೇ ಆಡಂಬರದ ಮದುವೆಯ ವಿಚಾರವಾಗಿ ಮಾತ್ತೆತ್ತಿದ್ದರು. ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದ ಶಾಸಕ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿ ಭವ್ಯ ಹಾಗೂ ಆಡಂಭರದ ಮದುವೆಗೆಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗಿಳಿಸಬೇಕಾಗಿ ವಿನಂತಿಸಿಕೊಂಡಿದ್ದರು.
ಮದುವೆಯ ಈ ಫೋಟೋಗಳಲ್ಲಿ ಮದುಮಗಳು ಅಪಾರ ಪ್ರಮಾಣದ ಚಿನ್ನ ಧರಿಸಿರುವುದು ಕಂಡು ಬರುತ್ತದೆ. ಈ ಫೋಟೋಗಳು ಬಹಿರಂಗವಾಗುತ್ತಿದ್ದಂತೆಯೇ ಮಾತೆತ್ತಿರುವ ಪಕ್ಷದ ಇತರ ಸದಸ್ಯರು ಇದರಿಂದ ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ಎಚ್ಚರಿಸಿದ್ದಾರೆ. ಇನ್ನು ಈ ಕುರಿತಾಗಿ ಮಾತನಾಡಿರುವ ಗೀತಾ ಗೋಪಿ 'ಮದುವೆ ಬಹಳ ಸರಳವಾಗಿ ನಡೆದಿದೆ, ಸಮಾಜದಲ್ಲಿ ಓರ್ವ ತಂದೆ ತನ್ನ ಮಗಳಿಗಾಗಿ ಏನು ಮಾಡುತ್ತಾರೋ ಅದನ್ನೇ ನಾನೂ ಮಾಡಿದ್ದೇನೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.