ಕುಲಭೂಷಣ್ ಜಾಧವ್ ಪ್ರಕರಣದ ಬಗ್ಗೆ ವಕೀಲ ಹರೀಶ್ ಸಾಳ್ವೆ ಹೇಳೋದೇನು?

Published : May 18, 2017, 09:32 PM ISTUpdated : Apr 11, 2018, 12:54 PM IST
ಕುಲಭೂಷಣ್ ಜಾಧವ್ ಪ್ರಕರಣದ ಬಗ್ಗೆ ವಕೀಲ ಹರೀಶ್ ಸಾಳ್ವೆ ಹೇಳೋದೇನು?

ಸಾರಾಂಶ

ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಕುಲಭೂಷಣ್ ಜಾಧವ್ ಪ್ರಕರಣ ಪ್ರಚೋದನಾಕಾರಿಯಾಗಿತ್ತು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.

ನವದೆಹಲಿ (ಮೇ.18): ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಕುಲಭೂಷಣ್ ಜಾಧವ್ ಪ್ರಕರಣ ಪ್ರಚೋದನಾಕಾರಿಯಾಗಿತ್ತು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.

ನಾನು 40 ವರ್ಷಗಳಿಂದ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ. ನ್ಯಾಯಾಧೀಶರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನಮಗೆ ಗೊತ್ತಿರುತ್ತದೆ. ನಾನು ವಾದ ಮಾಡುತ್ತಿರುವಾಗ ನನ್ನಲ್ಲಿ ಪಾಸಿಟೀವ್ ಎನರ್ಜಿಯಿತ್ತು. ನನ್ನ ವಾದ ಜಡ್ಜ್'ಗಳಿಗೆ ಅರ್ಥವಾಗುತ್ತಿದೆಯೆಂದು ನನಗೆ ಅರ್ಥವಾಗುತ್ತಿತ್ತು.  ನಾನವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಪಾಕಿಸ್ತಾನ ವಾದ ಮಾಡುತ್ತಿರುವಾಗ ನಾನು ತಲೆಕೆಡಿಸಿಕೊಳ್ಳಲಿಲ್ಲವೆಂದು  ಹರೀಶ್ ಸಾಳ್ವೆ ಹೇಳಿದ್ದಾರೆ.

ಇದೊಂದು ಜಟಿಲವಾದ ವಿಚಾರವಾಗಿತ್ತು. ನಾವು ಬಹಳ ಶ್ರಮ ವಹಿಸಿದ್ದೇವೆ. ಸರ್ಕಾರ ನನ್ನ ಸಲಹೆ ಮೇಲೆ ಸಂಪೂರ್ಣ ನಂಬಿಕೆಯಿಟ್ಟು ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತು. ಕುಲಭೂಷಣ್ ಪರ ವಾದ ಮಾಡಲು 1 ರೂಪಾಯಿ ಫೀ ತೆಗೆದುಕೊಂಡಿದ್ದಕ್ಕೆ ಪ್ರತಿಕ್ರಿಯಿಸುತ್ತಾ  ನಾನಿದನ್ನು ದೇಶದ ಹಿತಕ್ಕೋಸ್ಗರ ಮಾಡಿದ್ದೇನೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ