ಯೋಗಿ ಲೋಕಸಭಾ ಕ್ಷೇತ್ರದಲ್ಲಿ ಆಸ್ಪತ್ರೆ ದುರ್ವ್ಯವಸ್ಥೆ; 48 ಗಂಟೆಯೊಳಗೆ 30 ಶಿಶುಗಳು ಸಾವು

By Suvarna Web DeskFirst Published Aug 11, 2017, 10:11 PM IST
Highlights

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೋಕಸಭಾ ಕ್ಷೇತ್ರ ಗೋರಕ್ ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಮ್ಮಜನಕ ಕೊರತೆಯಿಂದಾಗಿ 48 ಗಂಟೆಯೊಳಗಾಗಿ 30 ಮಕ್ಕಳು ಮೃತಪಟ್ಟಿದ್ದಾರೆ. ಖಾಸಗಿ ಘಟಕವೊಂದು ಆಕ್ಸಿಜನ್ ಸಿಲಿಂಡರ್’ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದ್ದು, ಆಸ್ಪತ್ರೆಯಿಂದ ರೂ.60 ಲಕ್ಷ ಬರಬೇಕಾಗಿದ್ದ ಕಾರಣ ಆಮ್ಲಜನಕ ಸಿಲಿಂಡರ್’ಗಳ ಪೂರೈಕೆಯನ್ನು ನಿಲ್ಲಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಉತ್ತರ ಪ್ರದೇಶ (ಆ.11): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೋಕಸಭಾ ಕ್ಷೇತ್ರ ಗೋರಕ್ ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಮ್ಮಜನಕ ಕೊರತೆಯಿಂದಾಗಿ 48 ಗಂಟೆಯೊಳಗಾಗಿ 30 ಮಕ್ಕಳು ಮೃತಪಟ್ಟಿದ್ದಾರೆ. ಖಾಸಗಿ ಘಟಕವೊಂದು ಆಕ್ಸಿಜನ್ ಸಿಲಿಂಡರ್’ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದ್ದು, ಆಸ್ಪತ್ರೆಯಿಂದ ರೂ.60 ಲಕ್ಷ ಬರಬೇಕಾಗಿದ್ದ ಕಾರಣ ಆಮ್ಲಜನಕ ಸಿಲಿಂಡರ್’ಗಳ ಪೂರೈಕೆಯನ್ನು ನಿಲ್ಲಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ನವಜಾತ ಶಿಶು ತೀರ್ವನಿಗಾ ಘಟಕದಲ್ಲಿ 17 ಶಿಶುಗಳು ಮರಣ ಹೊಂದಿದರೆ, ಮಕ್ಕಳ ವಾರ್ಡ್’ನಲ್ಲಿ 8, ಇನ್ನೊಂದು ವಾರ್ಡ್’ನಲ್ಲಿ 5 ಮಕ್ಕಳು ಮೃತಪಟ್ಟಿರುವ ವರದಿಯಾಗಿದೆ.

Latest Videos

ಆಕ್ಸಿಜನ್ ಕೊರತೆಯೇ ಮಕ್ಕಳ ಸಾವಿಗೆ ಕಾರಣ ಎನ್ನುವ ಆರೋಪವನ್ನು ರಾಜ್ಯ ಆರೋಗ್ಯ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ತಳ್ಳಿ ಹಾಕಿದ್ದಾರೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು ನಾಳೆ ಸಂಜೆಯೊಳಗೆ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ.  

 

click me!