
ಕೊಟ್ಟೂರು (ಮಾ. 13): ಪರೀಕ್ಷೆ ಬರೆದಿದ್ದು ಒಬ್ಬನೇ ವಿದ್ಯಾರ್ಥಿ. ಆದರೆ ಪರೀಕ್ಷೆ ನಡೆಸಲು ನಿಯೋಜನೆಗೊಂಡಿದ್ದು 14 ಸಿಬ್ಬಂದಿ!
ಹೌದು ಇಂತಹ ಘಟನೆಯೊಂದು ನಡೆದದ್ದು ಕೊಟ್ಟೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ. ಮಂಗಳವಾರ ನಡೆದ ದ್ವಿತೀಯ ಪಿಯು ಭೂಗೋಳ ಶಾಸ್ತ್ರ (ಜಿಯಾಗ್ರಫಿ) ಪರೀಕ್ಷೆಗೆ ಕೊಟ್ಟೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಕಾಶ ಎಂಬ ಏಕೈಕ ವಿದ್ಯಾರ್ಥಿ ಹಾಜರಾಗಿದ್ದ.
ಅದೂ ಖಾಸಗಿ(ಬಾಹ್ಯ) ವಿದ್ಯಾರ್ಥಿಯಾಗಿ ಶಿಕ್ಷಣ ವಿಭಾಗ ಆಯ್ಕೆ ಮಾಡಿಕೊಂಡು ಭೂಗೋಳಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಬರೆದಿದ್ದ. ಈ ವಿಷಯ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವುದು ವಿರಳ ಎನ್ನಲಾಗಿದೆ. ಪರೀಕ್ಷಾ ಮೇಲ್ವಿಚಾರಕರು, ವಿಚಕ್ಷಕ ದಳ, ಸಿಟ್ಟಿಂಗ್ ಸ್ಕಾ$್ವಡ್, ಉತ್ತರ ಪತ್ರಿಕೆ ಪಾಲಕರು, ಅಧೀಕ್ಷಕರು ಸೇರಿದಂತೆ 14 ಸಿಬ್ಬಂದಿ ಕಾರ್ಯನಿರ್ವಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.