
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಐಎಂಎ ಸಂಸ್ಥೆ ಮಾಲಿಕ ಮನ್ಸೂರ್ ಖಾನ್ನ ರೇಂಜ್ ರೋವರ್ ಕಾರು ಪತ್ತೆಯಾಗಿದೆ. ಈ ಮೂಲಕ ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿಗೆ ಪುರಾವೆ ಸಿಕ್ಕಂತಾಗಿದೆ.
ನಗರದಲ್ಲಿ ಐಎಂಎ ಸಂಸ್ಥೆಯ 7 ನಿರ್ದೇಶಕರನ್ನು ಬುಧವಾರ ಬಂಧಿಸಿದ ಪೂರ್ವ ವಿಭಾಗದ ಪೊಲೀಸರು, ಆರೋಪಿಗಳ ಮಾಹಿತಿ ಮೇರೆಗೆ ಮನ್ಸೂರ್ ಖಾನ್ಗೆ ಸೇರಿದಂತೆ ರೇಂಜ್ ರೋವರ್ ಮತ್ತು ಜಾಗ್ವಾರ್ ಕಾರುಗಳನ್ನು ಜಪ್ತಿ ಮಾಡಿದ್ದರು. ಈ ಕಾರುಗಳ ಪೈಕಿ ರೇಂಜ್ ರೋವರ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಂಚನೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಮನ್ಸೂರ್ ತನ್ನ ಕುಟುಂಬಸಮೇತ ದುಬೈಗೆ ಓಡಿ ಹೋಗಿದ್ದಾನೆ ಎನ್ನಲಾಗುತ್ತಿದೆ. ಕಚೇರಿಗಳಿಗೆ ಬೀಗ ಜಡಿದ ಎಸ್ಐಟಿ: ಇನ್ನು ಈ ವಂಚನೆ ಪ್ರಕರಣದ ತನಿಖೆ ಆರಂಭಿಸಿದ ಎಸ್ಐಟಿ, ಗುರುವಾರ ಅಧಿಕೃತವಾಗಿ ಐಎಂಎ ಸಂಸ್ಥೆಯ ಕಚೇರಿಗಳಿಗೆ ಬೀಗ ಜಡಿ ದಿದೆ. ಶಿವಾಜಿನಗರದಲ್ಲಿರುವ ಐಎಂಎ ಕಚೇರಿ, ಚಿನ್ನಾಭರಣ ಮಳಿಗೆಗಳನ್ನು ಎಸ್ಐಟಿ ಸುಪರ್ದಿಗೆ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.