'ಪರ್ರಿಕರ್ 2 ದಿನಗಳಿಗೆ ಸುಲ್ತಾನನಾಗಬೇಕೆಂದಿದ್ದರೆ ಹಾಗೇ ಆಗಲಿ'

Published : Mar 14, 2017, 03:42 PM ISTUpdated : Apr 11, 2018, 01:08 PM IST
'ಪರ್ರಿಕರ್ 2 ದಿನಗಳಿಗೆ ಸುಲ್ತಾನನಾಗಬೇಕೆಂದಿದ್ದರೆ ಹಾಗೇ ಆಗಲಿ'

ಸಾರಾಂಶ

ಮನೋಹರ್ ಪರ್ರಿಕರ್ ಗೋವಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಕೇವಲ ಸಚಿವರ ನಡೆಯಾಗಿದ್ದು ಇದಕ್ಕೆ ಸಾಂವಿಧಾನಿಕ ಮಹತ್ವವಿಲ್ಲ. 48 ಗಂಟೆಗಳಲ್ಲಿ ನಡೆಯುವ ವಿಶ್ವಾಸ ಮತಯಾಚನೆಯಲ್ಲಿ ಮುಖಭಂಗವಾಗಲಿದೆ ಎಂದು ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ.

ನವದೆಹಲಿ (ಮಾ.14): ಮನೋಹರ್ ಪರ್ರಿಕರ್ ಗೋವಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಕೇವಲ ಸಚಿವರ ನಡೆಯಾಗಿದ್ದು ಇದಕ್ಕೆ ಸಾಂವಿಧಾನಿಕ ಮಹತ್ವವಿಲ್ಲ. 48 ಗಂಟೆಗಳಲ್ಲಿ ನಡೆಯುವ ವಿಶ್ವಾಸ ಮತಯಾಚನೆಯಲ್ಲಿ ಮುಖಭಂಗವಾಗಲಿದೆ ಎಂದು ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ.

ಮನೋಹರ್ ಪರ್ರಿಕರ್ ವಿರುದ್ಧ ವಾಗ್ದಾಳಿ ನಡೆಸುತ್ತಾ, 2 ದಿನಗಳ ಮಟ್ಟಿಗೆ ಅವರಿಗೆ ಸುಲ್ತಾನ ನಾಗಬೇಕೆನ್ನುವ ಇರಾದೆಯಿದ್ದರೆ ಅವರು ಪ್ರಮಾಣವಚನ ಸ್ವೀಕರಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಸಿಂಗ್ವಿ ಹೇಳಿದ್ದಾರೆ.

ಕಾಂಗ್ರೆಸ್ ನ ಟೀಕೆಗೆ ಉತ್ತರಿಸುತ್ತಾ ಪರ್ರಿಕರ್, ಕಾಂಗ್ರೆಸ್ ನಲ್ಲಿ ಅಂತಃಕಲಹ ಇರುವುದು ಎಲ್ಲರಿಗೂ ಗೊತ್ತಿರುವಂತದ್ದೇ ವಿಚಾರ ಹಾಗಾಗಿ ಯಾರೊಬ್ಬರೂ ಅವರಿಗೆ ಬೆಂಬಲಸಲು ತಯಾರಿಲ್ಲ. ಕಳೆದ 10 ವರ್ಷಗಳಲ್ಲಿ 12 ಜನ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಪಕ್ಷದಲ್ಲಿರುವ ಅಂತಃಕಲಹದಿಂದ ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ. ನಮಗೆ ಮೊದಲನೇ ದಿನ 21 ಶಾಸಕರ ಬೆಂಬಲವಿತ್ತು. ಇಂದು 22 ಸಂಖ್ಯಾಬಲವಿದೆ. ನಾಡಿದ್ದು ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ಮುಂದಿನ 365*5 ನಾವೇ ಆಡಳಿತ ನಡೆಸುತ್ತೇವೆ ಎಂದು ಗುಡುಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲಸ ಮಾಡದಿದ್ರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸ್ತೇನೆ; ಮಾಗಡಿ ತಹಸೀಲ್ದಾರ್‌ಗೆ ಶಾಸಕ ಬಾಲಕೃಷ್ಣ ಹಿಗ್ಗಾಮುಗ್ಗ ತರಾಟೆ!
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ