
ಅಹಮದಾಬಾದ್ (ಡಿ.17): ಗುಜರಾತ್ ಚುನಾವಣಾ ಹಣಾಹಣಿ ಮುಕ್ತಾಯವಾಗಿದೆ. ಇನ್ನೇನು ಫಲಿತಾಂಶ ಬರಲು ಕೆಲ ಗಂಟೆಗಳು ಬಾಕಿ ಉಳಿದಿದೆ. ಇದೇ ವೇಳೆ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಇವಿಎಂ ಬಗ್ಗೆ ಚಕಾರವೆತ್ತಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಹಾರ್ದಿಕ್ ಪಟೇಲ್ ನನ್ನ ಮಾತು ನಿಮಗೆಲ್ಲಾ ನಗುವನ್ನು ತರಿಸಬಹುದು. ಆದರೆ ದೇವರೇ ಮಾಡಿರುವ ನಮ್ಮ ದೇಹದಲ್ಲಿಯೇ ಸಮಸ್ಯೆಗಳು ಕಂಡು ಬರುತ್ತದೆ ಎಂದಾದಲ್ಲಿ ಮನುಷ್ಯ ಮಾಡಿರುವ ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲವೇ ಎಂದು ಹೇಳಿದ್ದಾರೆ. ಎಟಿಎಂಗಳನ್ನೇ ಹ್ಯಾಕ್ ಮಾಡಬಹುದು ಎಂದಾದಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲವೇ ಎಂದಿದ್ದಾರೆ.
ಆದರೆ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಹಮದಾಬಾದ್ ಕಲೆಕ್ಟರ್ ಆವಂತಿಕಾ ಸಿಂಗ್ ಇದೊಂದು ಆಧಾರ ರಹಿತವಾದ ಆರೋಪವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಯಾವುದೇ ರೀತಿಯಾದ ಸ್ಪಷ್ಟೀಕರಣವನ್ನು ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.