
ಬೆಂಗಳೂರು (ಡಿ.17): ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ಗೆ ಜೈಲಲ್ಲಿ ರಾಜಾತಿಥ್ಯ ಕೊಡಲಾಗಿದೆ ಎಂಬ ಡಿಐಜಿ ರೂಪಾ ಆರೋಪಕ್ಕೆ ತಿರುವು ಸಿಕ್ಕಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಮಹಾರಾಣಿಯಂತೆ ಇದ್ದಾಳೆ ಎಂದಿದ್ದರು ರೂಪಾ. ಆದರೆ ಡಿಐಜಿ ರೂಪಾ ಆರೋಪಕ್ಕೆ ಆರ್ಟಿಐನಲ್ಲಿ ಸೂಕ್ತ ಪುರಾವೆ ಸಿಕ್ಕಿಲ್ಲ. ಶಶಿಕಲಾಗೆ ರಾಜಾತಿಥ್ಯ ನೀಡಿದ್ದ ಬಗ್ಗೆ ರೂಪಾ ಆರ್ಟಿಐ ಸಲ್ಲಿಸಿದ್ದರು. ಇದರಲ್ಲಿ ಸಿಕ್ಕ ಮಾಹಿತಿಗೂ, ರೂಪಾ ಕೊಟ್ಟ ವರದಿ ತದ್ವಿರುದ್ದವಾಗಿದೆ. ಸಾಮಾನ್ಯ ಕೈದಿಗಳಿಗೆ ಕೊಡುವಷ್ಟೇ ಸೌಲಭ್ಯವನ್ನು ಶಶಿಕಲಾಗೂ ಕೊಡಲಾಗಿದೆ. ಜೈಲಿನಲ್ಲಿ ಒಂದು ಸ್ಟೀಲ್ ತಟ್ಟೆ, ಒಂದು ಸ್ಟೀಲ್ ಲೋಟ ಕೊಡಲಾಗಿದೆ. ಚೊಂಬು, ಒಂದು ಬೆಡ್ ಕಾರ್ಪೆಟ್, 2 ಬೆಡ್ ಶೀಟ್, 2 ಕಂಬಳಿ, 2 ಜತೆ ಬಿಳಿ ಸೀರೆ, ಲಂಗ, ರವಿಕೆಯನ್ನು ಮಾತ್ರ ನೀಡಲಾಗಿತ್ತು. ಜೈಲಿನಲ್ಲಿ ಶಶಿಕಲಾ ಬೇರೆ ಯಾವ ವಸ್ತುವನ್ನು ಖರೀದಿಸಿಲ್ಲ ಎಂದು ಆರ್ಟಿಐ ಮಾಹಿತಿಯಲ್ಲಿ ಜೈಲು ಅಧಿಕಾರಿಗಳು ಕೊಟ್ಟ ವಿವರಣೆ ಕೊಟ್ಟಿದ್ದಾರೆ.
ಇವತ್ತು ಬಿಡುಗಡೆಯಾಗಿರೋ ಆರ್'ಟಿಐ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಮಾಹಿತಿಯನ್ನು ಕೇಂದ್ರ ಕಾರಾಗೃಹ ದಿಂದ ಪಡೆದಿರುತ್ತಾರೆ. ಆದರೆ ನಾನು ಕಣ್ಣಾರೆ ಕಂಡಂತೆ ನಾನು ವರದಿ ಸಲ್ಲಿಸಿದ್ದೇನೆ. ನಾನೂ ಈಗಾಗಲೇ ಎಸಿಬಿ ಮತ್ತು ವಿನಯ್ ಕುಮಾರ್ ವರದಿಯಲ್ಲೇನಿದೆ ಎಂದು ತಿಳಿಯಲು ಆರ್'ಟಿಐನಲ್ಲಿ ಅರ್ಜಿ ಹಾಕಿದ್ದೇನೆ ಎಂದು ಡಿಐಜಿ ರೂಪಾ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.
ಸತ್ಯನಾರಯಣ್ ರಾವ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದನ್ನು ನಾನು ಎದುರಿಸುತ್ತೇನೆ. ಫೆ. 16 ಕ್ಕೆ ಅದರ ವಿಚಾರಣೆ ಇದೆ ಅದನ್ನು ಎದುರಿಸುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.