ಕ್ಷೇತ್ರದ 40 ವರ್ಷದಇತಿಹಾಸದಲ್ಲಿಈಮಟ್ಟದಅನುದಾನಬಂದಿಲ್ಲ. ಈಕುರಿತುಯಾರೇಬಹಿರಂಗಚರ್ಚೆಗೆಬಂದರೂದಾಖಲೆಸಮೇತಚರ್ಚೆಗೆಸಿದ್ಧನಿದ್ದೇನೆ.
ಕಡೂರು(ಫೆ.19): ಎಲ್ಲೋ ಕುಳಿತು ಜನರಿಗೆ ಸಿಗದ ವೀಕೆಂಡ್ ಶಾಸಕ ಎಂದು ಟೀಕಿಸುವವರು ಕ್ಷೇತ್ರದ ರಸ್ತೆಗಳಲ್ಲಿ ತಿರುಗಾಡಿ ಬರಲಿ ಎಂದು ಶಾಸಕ ವೈ.ಎಸ್.ವಿ. ದತ್ತ ಸವಾಲು ಹಾಕಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೂರೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ರಸ್ತೆಗಳ ಸಂಪರ್ಕ ಕ್ರಾಂತಿ ನಡೆದಿದೆ. ಕ್ಷೇತ್ರದ 40 ವರ್ಷದ ಇತಿಹಾಸದಲ್ಲಿ ಈ ಮಟ್ಟದ ಅನುದಾನ ಬಂದಿಲ್ಲ. ಈ ಕುರಿತು ಯಾರೇ ಬಹಿರಂಗ ಚರ್ಚೆಗೆ ಬಂದರೂ ದಾಖಲೆ ಸಮೇತ ಚರ್ಚೆಗೆ ಸಿದ್ಧನಿದ್ದೇನೆ. ಟೀಕಿಸುವವರು ನನ್ನೊಟ್ಟಿಗೆ ಬಂದರೆ ರಸ್ತೆಗಳು ಮೊದಲು ಹೇಗಿದ್ದವು, ಈಗ ಹೇಗಿವೆ ಎಂಬುದನ್ನು ಸಾಕ್ಷಿ ಸಮೇತ ತೋರಿಸುತ್ತೇನೆ. ವಾಸ್ತವತೆ ಅರಿತು ಟೀಕಿಸಲಿ ಎಂದು ಸವಾಲು ಹಾಕಿದ್ದಾರೆ.