
ಹಾಸನ(ಮೇ.19): ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಒಪ್ಪಿಕೊಂಡು ನಿಭಾಯಿಸಲು ಸಿದ್ದ ಎಂದು ಆರೋಗ್ಯ ಸಚಿವ ರಮೇಶ್ಕುಮಾರ್ ತಿಳಿಸಿದ್ದಾರೆ.
ಹಾಸನದ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಸೀನಿಯರ್ ಇರಬಹುದು, ಆದರೆ ಆಯ್ಕೆ ಮಾಡುವವರಿಗೆ ಅದು ಗೊತ್ತಿರಬೇಕಲ್ಲ ಅನ್ನುವ ಮೂಲಕ ನಾನು ಕೆಪಿಸಿಸಿ ಅಧ್ಯಕ್ಷ ಅನ್ನುವ ಭಾವನೆಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷ ಸ್ಥಾನದ ಬಗ್ಗೆ ಇರೋ ಗೊಂದಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾರ್ಡ್ವೇರ್ ಅಂಗಡಿಗೆ ನೊಣ ಬರುತ್ತವೆಯಾ? ಮಿಠಾಯಿ ಅಂಗಡಿಗೆ ನೊಣ ಬರೋದು ಸಹಜ. ರಾಜಕೀಯ ಪಕ್ಷ, ಸ್ಥಾನದ ವಿಷಯ ಬಂದಾಗ ಗೊಂದಲ ಸಾಮಾನ್ಯ ಅಂದರು. ಒಂದು ಸ್ಥಾನಕ್ಕೆ 6-7 ಆಕಾಂಕ್ಷಿಗಳಿದ್ದಾರೆ, ನನ್ ಹೆಸರನ್ನು ನೀವಾದ್ರು ಶಿಫಾರಸ್ಸು ಮಾಡಿ ಅಂತಾ ಹಾಸ್ಯದಾಟಿಯಲ್ಲಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.