
ವಾರಿಜಶ್ರೀ ವೇಣುಗೋಪಾಲ್ ಎಂಬ ಯುವತಿ ವೀಸಾ ಸಂದರ್ಶನಕ್ಕಾಗಿ ಹೈದರಾಬಾದಿಗೆ ಬಂದಿದ್ದು, ಆಕೆ ರೂ.5000 ಶುಲ್ಕವನ್ನು ಪಾವತಿಸಬೇಕಾಗಿತ್ತು. ಆದರೆ ಆಕೆಯ ಬಳೆ ಕೇವಲ ರೂ.2000 ಮಾತ್ರ ಇತ್ತು. ಆದರೆ ಹತ್ತಿರದ ಏಟಿಎಮ್’ಗಳಲ್ಲಿ ದುಡ್ಡು ಇರಲಿಲ್ಲ. ಆಟೋ ಹಿಡಿದು 10-15 ಏಟಿಎಮ್’ಗಳಿಗೂ ಸುತ್ತಾಡಿದರೂ ಪ್ರಯೋಜನವಾಗಲಿಲ್ಲ. ಅಂಗಡಿಯವರಿಗೆ ಕಾರ್ಡ್ ಸ್ವೈಪ್ ಮಾಡಿ ನಗದನ್ನು ಕೊಡುವಂತೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಆಗ ಆಕೆಯ ಸಹಾಯಕ್ಕಾಗಿ ಬಂದವರು ಆಕೆಯ ಆಟೋ ಚಾಲಕ. ಹೆಣ್ಮಗಳು ಹಣಕ್ಕಾಗಿ ಪರದಾಡುತ್ತಿರುವ ಕಷ್ಟವನ್ನು ಅರ್ಥಮಾಡಿಕೊಂಡ ಆಟೋ ಚಾಲಕ ಬಾಬ ಬವರು ತಮ್ಮ ಬಳಿ ಜಮೆಯಾಗಿದ್ದ ರೂ.3000ವನ್ನು ಆಕೆಗೆ ಕೊಟ್ಟಿದ್ದಾರೆ.
ಮೇಡಂ, ನೀವಿದನ್ನು ಸದ್ಯಕ್ಕೆ ಇಟ್ಟುಕೊಳ್ಳಿ, ಸಂದರ್ಶನ ಮುಗಿದ ಬಳಿಕ ಹಿಂತಿರುಗಿಸಿ ಪರ್ವಾಗಿಲ್ಲವೆಂದು ಬಾಬ ಹೇಳಿದ್ದಾರೆ. ಈ ವಿಷಯವನ್ನು ಫೇಸ್’ಬುಕ್’ನಲ್ಲಿ ಹಂಚಿಕೊಂಡಿರುವ ವಾರಿಜಶ್ರೀ ಆಟೋ ಚಾಲಕ ಅಪರಿಚಿತರೊಬ್ಬರಿಗೆ ಸಹಾಯ ಮಾಡಿರುವುದನ್ನು ಭಾವುಕಳಾಗಿ ಸ್ಮರಿಸಿಕೊಂಡಿದ್ದಾಳೆ. ಮಾನವೀಯತೆಯು ಎಲ್ಲಾ ಧರ್ಮಗಳಿಗಿಂತ ಮಿಗಿಲು ಎಂದು ನೆನಪಿಸಿದ್ದಕ್ಕೆ ವಾರಿಜಶ್ರೀ ಬಾಬಗೆ ಧನ್ಯವಾದ ಅರ್ಪಿಸಿದ್ದಾಳೆ.
ಏ.11 ಕ್ಕೆ ಹಾಕಿರುವ ಪೋಸ್ಟ್ ಕೆಲವು ದಿನಗಳಲ್ಲೇ 4900 ಶೇರ್ ಆಗಿದ್ದು, 21000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.