
ಹೈದರಾಬಾದ್: ಹೈದರಾಬಾದ್’ನ ಈ 12 ವರ್ಷದ ಬಾಲಕ ಜವಾಬ್ದಾರಿ ಏನೆಂಬುವುದನ್ನು ಇಡಿಯ ದೇಶಕ್ಕೆ ತೋರಿಸಿಕೊಟ್ಟಿದ್ದಾನೆ.
ಇತ್ತೀಚೆಗೆ ನಗರದ ಹಬ್ಸಿಗುಡಾ ರಸ್ತೆಯಲ್ಲಿರುವ ಹೊಂಡದಿಂದಾಗಿ ಅಪಘಾತವೊಂದು ಸಂಭವಿಸಿ ಮಗುವೊಂದು ಮೃತಪಟ್ಟಿತ್ತು. ಈ ಘಟನೆಯಿಂದ ನೊಂದ ಬಾಲಕ ರವಿ ತೇಜ ರಸ್ತೆ ಗುಂಡಿಗಳನ್ನು ಮುಚ್ಚಿ ಎಲ್ಲರಿಗೂ ಮಾದರಿಯಾಗಿದ್ದಾನೆ.
ರಸ್ತೆಹೊಂಡಗಳಿಂದಾಗಿ ಬೈಕೊಂದು ಇತ್ತೀಚೆಗೆ ಅಪಘಾತಕ್ಕೊಳಗಾಗಿ ಆದರಲ್ಲಿದ್ದ 6 ತಿಂಗಳ ಮಗುವೊಂದು ಮೃತಪಟ್ಟಿತ್ತು. ಇನ್ಮುಂದೆ ಈ ರೀತಿ ಯಾರು ಸಾಯಬಾರದು. ಅದಕ್ಕಾಗಿ ನಾನು ರಸ್ತೆಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದ್ದೇನೆ, ಎಂದು ರವಿ ತೇಜ ಹೇಳಿದ್ದಾನೆ.
5ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವ ರವಿ ತೇಜ ಭಾನುವಾರ ಗಂಟೆಗಟ್ಟಲೆಗಳ ಕಾಲ ಬಿಸಿಲು, ಟ್ರಾಫಿಕ್, ಧೂಳನ್ನು ಲೆಕ್ಕಿಸದೇ ರಸ್ತೆಹೊಂಡಗಳನ್ನು ಮುಚ್ಚುವ ಕೆಲಸದಲ್ಲಿ ನಿರತನಾಗಿದ್ದನು.
ಬಾಲಕನ ಈ ಕ್ರಮ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆಯಲ್ಲದೆ, ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಮಾಡಿದೆ.
ಫೋಟೋ ಕೃಪೆ: ಏಎನ್’ಐ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.