ಮಾಜಿ ಸಂಸದ ಹೆಚ್. ವಿಶ್ವನಾಥ್ ಜೆಡಿಎಸ್ ಸೇರಲು ಮುಹೂರ್ತ ಫಿಕ್ಸ್

By Suvarna Web DeskFirst Published May 23, 2017, 6:25 PM IST
Highlights

ಮೈಸೂರಿನಲ್ಲಿಕಾರ್ಯಕರ್ತರಸಮಾವೇಶದಮೂಲಕಸೇರಿಸಿಕೊಳ್ಳಲುಜೆಡಿಎಸ್ರಾಜ್ಯಾಧ್ಯಕ್ಷಹೆಚ್.ಡಿ. ಕುಮಾರಸ್ವಾಮಿಚಿಂತನೆ ನಡೆಸಿದ್ದಾರೆ.

ಬೆಂಗಳೂರು(ಮೇ.23): ಮಾಜಿ ಸಂಸದ ಹೆಚ್.ವಿಶ್ವನಾಥ್ ಜೆಡಿಎಸ್ ಸೇರಲು ಮುಹೂರ್ತ ಫಿಕ್ಸ್ ಆಗಿದೆ. ಜೂನ್ 7 ರಂದು‌ ಕಾಂಗ್ರೆಸ್ ತೊರೆದು‌ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.  

ಮೈಸೂರಿನಲ್ಲಿ ಕಾರ್ಯಕರ್ತರ ಸಮಾವೇಶದ ಮೂಲಕ ಸೇರಿಸಿಕೊಳ್ಳಲು ಜೆಡಿಎಸ್ ರಾಜ್ಯಾಧ್ಯಕ್ಷ  ಹೆಚ್.ಡಿ. ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಅದ್ದೂರಿ ಕಾರ್ಯಕ್ರಮದ ಬದಲು ಪಕ್ಷದ ಕಚೇರಿಯಲ್ಲಿ ಸರಳ ಸಮಾರಂಭದ ಮೂಲಕ ಪಕ್ಷಕ್ಕೆ ಬರಮಾಡಿಕೊಳ್ಳಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ. ದೇವೇಗೌಡ ಒಲವು ತೋರಿಸಿದ್ದಾರೆ ಎನ್ನಲಾಗಿದೆ.   ಅಂತಿಮವಾಗಿ ‌ಕುಮಾರಸ್ವಾಮಿ‌ ನಿರ್ಧಾರದಂತೆ ಮೈಸೂರು ಅಥವಾ ಬೆಂಗಳೂರಿನಲ್ಲಿ ಜೆಡಿಎಸ್'ಗೆ  ಸೇರ್ಪಡೆಯಾಗಲಿದ್ದಾರೆ.

click me!