
ಗ್ರೀನ್ ಹೌಸ್'ನಲ್ಲಿ ಹುಚ್ಚ ವೆಂಕಟ್ ಅವರಿಗೆ ಪತ್ರಕರ್ತರು ಬಿಗ್'ಬಾಸ್'ನಲ್ಲಿ ನಡೆದಿದ್ದ ಘಟನೆಯ ಬಗ್ಗೆ ಪ್ರಶ್ನೆಗಳ ಸುರಿ'ಮಳೆಯನ್ನೇ ಹರಿಸಿದರು. ಸೀರಿಯೆಸ್ ಆಗಿದ್ದ ವೆಂಕಟ್ ಉತ್ತರದಿಂದ ಗಾಂಭಿರತೆ ಕಳೆದುಕೊಂಡು, ನನ್ನ ಎಕ್ಕಡಾನೂ ಪ್ರಥಮ್ ಗೆ ಸಾರಿ ಕೇಳಿಲ್ಲ ಅಂತಲೂ ಹೇಳಿಬಿಟ್ಟರು.
ಆದರೆ ಇಲ್ಲೊಂದು ಒಳ್ಳೆಯ ಕೆಲಸ ಎಲ್ಲರ ಗಮನ ಸೆಳೆಯಿತು. ಅನಾರೋಗ್ಯ ಪೀಡಿತರಾದ ಉತ್ತರ ಹಳ್ಳಿ ನಿವಾಸಿ ಆಟೋ ಡ್ರೈವರ್ ಮಲ್ಲೇಶ್ ಎಂಬುವವರಿಗೆ 10 ಸಾವಿರ ರೂಪಾಯಿ ಚೆಕ್ ಕೊಟ್ಟು ಮಾನವೀಯತೆ ಮೆರೆದರು. ಮಲ್ಲೇಶ್ ಎದೆ ನೋವಿನಿಂದ ಬಳಲುತ್ತಿದ್ದಾರೆ. ಎಂ.ಆರ್.ಐ.ಸ್ಕ್ಯಾನಿಂಗ್ ಗೆ ಈ ದೊಡ್ಡ ಕೊಟ್ಟಿರುವುದಾಗಿ ವೆಂಕಟ್ ತಿಳಿಸಿದರು. ಅಲ್ಲದೆ ಮುಂದಿನ ಚಿಕಿತ್ಸೆಗೂ ದುಡ್ಡು ಕೊಡುವುದಾಗಿ ತಿಳಿಸಿದರು. ವೆಂಕಟ್ ಅವರ ಔದಾರ್ಯತೆಗೆ ಆಟೋ ಡ್ರೈವರ್ ಮಲ್ಲೇಶ್ ಸಹ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.