ರಾಧೆ ಮಾಗೆ ತಮ್ಮ ಸೀಟು ಬಿಟ್ಟುಕೊಟ್ಟು ಆದರಿಸಿದ ಪೊಲೀಸ್ ಅಧಿಕಾರಿ ಸಂಜಯ್ ಶರ್ಮಾ ಅಮಾನತು

Published : Oct 05, 2017, 08:20 PM ISTUpdated : Apr 11, 2018, 12:49 PM IST
ರಾಧೆ ಮಾಗೆ ತಮ್ಮ ಸೀಟು ಬಿಟ್ಟುಕೊಟ್ಟು ಆದರಿಸಿದ ಪೊಲೀಸ್ ಅಧಿಕಾರಿ ಸಂಜಯ್ ಶರ್ಮಾ ಅಮಾನತು

ಸಾರಾಂಶ

ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾ ಅಲಿಯಾಸ್‌ ಸುಖ್ವಿಂದರ್ ಖೌರ್‌ಗೆ  ಪೊಲೀಸ್​ ಠಾಣೆಯಲ್ಲಿ ರಾಜೋಪಚಾರ ಮಾಡಿ ಗೌರವಿಸಲಾಗಿದ್ದು ಇದೀಗ ವೈರಲ್ ಆಗಿದೆ.

ನವದೆಹಲಿ (ಅ.05): ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾ ಅಲಿಯಾಸ್‌ ಸುಖ್ವಿಂದರ್ ಖೌರ್‌ಗೆ  ಪೊಲೀಸ್​ ಠಾಣೆಯಲ್ಲಿ ರಾಜೋಪಚಾರ ಮಾಡಿ ಗೌರವಿಸಲಾಗಿದ್ದು ಇದೀಗ ವೈರಲ್ ಆಗಿದೆ.

ಕೌಟುಂಬಿಕ ಹಿಂಸೆ ಪ್ರಕರಣವೊಂದರಲ್ಲಿ  ಕೈವಾಡ ಆರೋಪ ಹೊತ್ತಿರುವ ರಾಧೆ ಮಾರನ್ನು ತನಿಖೆಗೆಂದು ಠಾಣೆಗೆ ಕರೆಸಲಾಗಿತ್ತು. ತನಿಖೆಗೆಂದು ರಾಧೆ ಮಾ  ದೆಹಲಿಯ ವಿವೇಕ್‌ ವಿಹಾರ್‌ ಪೊಲೀಸ್‌ ಠಾಣೆಗೆ ಬಂದಾಗ ಎಸ್​ಎಚ್​ಒ ಸಂಜಯ ಶರ್ಮಾ ತಮ್ಮ  ಸೀಟಿನಲ್ಲಿ  ಕುಳ್ಳಿರಿಸಿ ರಾಧೇ ಮಾ ಗೌರವಿಸಿದರು. ರಾಧೆ ಮಾ ಪಕ್ಕದಲ್ಲೇ ನಿಂತು ಕೈಮುಗಿದು, ಕೆಂಪು ಶಲ್ಯ ಹೊದಿಸಿ ಠಾಣಾಧಿಕಾರಿ ಗೌರವಿಸಿದರು. ಎಎನ್​ಐ ರೆಕಾರ್ಡ್​ ಮಾಡಿದ ಈ ವಿಡಿಯೋ ಈಗ ದೇಶಾದ್ಯಂತ ವೈರಲ್​ ಆಗಿದೆ.

ಇದೀಗ ಸಂಜಯ್ ಶರ್ಮಾರನ್ನು ಅಮಾನತುಗೊಳಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ