ಆಧಾರ್'ಗೆ ಸಿಮ್ ಸಂಪರ್ಕಿಸಲು ಹೋಗಿ ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಭೂಪ

Published : Jan 12, 2018, 07:26 PM ISTUpdated : Apr 11, 2018, 12:36 PM IST
ಆಧಾರ್'ಗೆ ಸಿಮ್ ಸಂಪರ್ಕಿಸಲು ಹೋಗಿ ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಭೂಪ

ಸಾರಾಂಶ

ಗ್ರಾಹಕರು ಮೊಬೈಲ್ ಕಂಪನಿಗಳ ಸೇವಾ ಕೇಂದ್ರಗಳಿಗೆ ತೆರಳಿ ಈ ಪ್ರಕ್ರಿಯೆ ಪೂರ್ತಿಗೊಳಿಸುವುದು ಕಷ್ಟವಾಗುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಇತ್ತೀಚಿಗೆ ಆತಂಕ ವ್ಯಕ್ತಪಡಿಸಿತ್ತು

ಜೈಪುರ(ಜ.12):  ಆಧಾರ್'ಗೆ ಮೊಬೈಲ್ ಸಿಮ್ ಸಂಪರ್ಕಿಸಲು ಹೋಗಿ ವ್ಯಕ್ತಿಯೊಬ್ಬರು 1.10 ಲಕ್ಷ ರೂ. ಕಳೆದುಕೊಂಡ ಘಟನೆ ಜೈಪುರದ ಬಾಪು ನಗರದಲ್ಲಿ ನಡೆದಿದೆ.

ಬಾಪುನಗರದ ಬ್ರಿಜ್'ವಾನಿ ಎಂಬುವವರಿಗೆ ವ್ಯಕ್ತಿಯೊಬ್ಬ ತಮ್ಮ ಮೊಬೈಲ್'ಗೆ  ಆಧಾರ್ ಜೋಡಿಸುವುದಾಗಿ ತಿಳಿಸಿ ಮೊಬೈಲ್ ಸಿಮ್ ಹಾಗೂ ಆಧಾರ್ ಸಂಖ್ಯೆಯನ್ನು ಪಡೆದುಕೊಂಡಿದ್ದಾನೆ. ತದ ನಂತರ ಹಳೆಯ ಸಿಮ್ ಅನ್ನು ನಿಷ್ಕ್ರಿಸುವ ಬದಲು ಹೊಸ ಸಿಮ್ ನೀಡಿದ್ದಾನೆ.  ಬ್ರಿಜ್'ವಾನಿ ಅವರ ಹಳೆಯ ಸಿಮ್ ಬಳಸಿದ ಆ ವ್ಯಕ್ತಿ 1.10 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾನೆ. ಮರು ದಿನ ಬ್ಯಾಂಕಿಗೆ ಹೋದ ನಂತರವಷ್ಟೆ ಬ್ರಿಜ್'ವಾನಿ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ.

ಸರ್ಕಾರದ ನಿರ್ದೇಶನದ ಪ್ರಕಾರ ಮೊಬೈಲ್ ಬಳಕೆದಾರರು ತಮ್ಮ ಸಿಮ್'ಗಳನ್ನು ಮಾರ್ಚ್‌ 31ರೊಳಗೆ ಆಧಾರ್‌ಗೆ ಜೋಡಿಸುವುದು ಕಡ್ಡಾಯವಾಗಿದೆ. ಗ್ರಾಹಕರು ಮೊಬೈಲ್ ಕಂಪನಿಗಳ ಸೇವಾ ಕೇಂದ್ರಗಳಿಗೆ ತೆರಳಿ ಈ ಪ್ರಕ್ರಿಯೆ ಪೂರ್ತಿಗೊಳಿಸುವುದು ಕಷ್ಟವಾಗುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಇತ್ತೀಚಿಗೆ ಆತಂಕ ವ್ಯಕ್ತಪಡಿಸಿತ್ತು. ದೇಶದಲ್ಲಿ 50 ಕೋಟಿಗೂ ಅಧಿಕ ಮೊಬೈಲ್‌ ಚಂದಾದಾರರು ಆಧಾರ್‌ಗೆ ಸಂಪರ್ಕಿಸಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಚಿತೆಯಿಂದ ಎದ್ದು ಬಂದು ಬರ್ತ್‌ಡೇ ಆಚರಿಸಿದ 103ರ ಹರೆಯದ ಅಜ್ಜಿ
ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ