(ವಿಡಿಯೋ) ಮಾಸ್ತಿಗುಡಿ ಸಿನಿಮಾ ಕ್ಕೈಮ್ಯಾಕ್ಸ್'ನಲ್ಲಿ ನಡೆದಿದ್ದೇನು..? ಉದಯ್ ಹಾಗೂ ಅನಿಲ್ ಸಾವಿಗೇ ಕಾರಣವೇನು..?

Published : Nov 07, 2016, 10:06 AM ISTUpdated : Apr 11, 2018, 12:54 PM IST
(ವಿಡಿಯೋ) ಮಾಸ್ತಿಗುಡಿ ಸಿನಿಮಾ ಕ್ಕೈಮ್ಯಾಕ್ಸ್'ನಲ್ಲಿ ನಡೆದಿದ್ದೇನು..? ಉದಯ್ ಹಾಗೂ ಅನಿಲ್ ಸಾವಿಗೇ ಕಾರಣವೇನು..?

ಸಾರಾಂಶ

ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್​ ಶೂಟಿಂಗ್ ವೇಳೆ  ಕೆರೆಗೆ ಹಾರಿದ್ದ ಇಬ್ಬರು ಕಣ್ಮರೆಯಾಗಿ ಆತಂಕ ಹುಟ್ಟಿಸಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್​ನಿಂದ  ಕಲಾವಿದರು ಹಾರಿದ್ದರು ಎನ್ನಲಾಗಿದೆ. 

ಬೆಂಗಳೂರು(ನ.07): ಈಜಲು ಬಾರದಿದ್ದರು ನಮ್ಮ ಗುರು ದುನಿಯಾ ವಿಜಯ್ ಇದ್ದಾರೆ ಎಂದು 100 ಅಡಿ ಎತ್ತರದಿಂದ ಕೆರೆಗೆ ಹೆಲಿಕಾಪ್ಟರ್​ನಿಂದ ಹಾರಿದ್ದ ಇಬ್ಬರು ಕಲಾವಿದರು ಇಂದು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. 

ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್​ ಶೂಟಿಂಗ್ ವೇಳೆ  ಕೆರೆಗೆ ಹಾರಿದ್ದ ಇಬ್ಬರು ಜೀವ ಬಿಟ್ಟಿದ್ದು, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್​ನಿಂದ  ಕಲಾವಿದರು ಹಾರಿದ್ದರು ಎನ್ನಲಾಗಿದೆ. 

ಈ ವೇಳೆ ದುನಿಯಾ ವಿಜಯ್ ಜೊತೆ ಕೆರೆಗೆ ಹಾರಿದ್ದ ಉದಯ್​, ಅನಿಲ್ ಸಾವನ್ನಪ್ಪಿದ್ದರೆ, ನಟ ದುನಿಯಾ ವಿಜಯ್​  ಈಜಿ ದಡ ಸೇರಿದ್ದಾರೆ. ಆದರೆ ಇವರಿಬ್ಬರು ದಡ ಸೇರಿಲ್ಲ. ಸದ್ಯ  ಇಬ್ಬರು ಕಲಾವಿದರ ದೇಹಕ್ಕೆ ಕೆರೆಯಲ್ಲಿ ತೀವ್ರ ಶೋಧ ಕಾರ್ಯ ನಡೀತಿದೆ. 

ಕೆಲವು ಷರತ್ತುಗಳನ್ನು ವಿರೋಧಿಸಿ ಚಿತ್ರೀಕರಣ ನಡೆಯುತ್ತಿತ್ತು ಎನ್ನಲಾಗಿದ್ದು, ಜಲಮಂಡಳಿ ಅನುಮತಿಯನ್ನು ಮೀರಿ ನಟರು ಯಾವುದೇ ಸುರಕ್ಷೆ ಇಲ್ಲದೇ ನೀರಿಗೆ ಬಿದ್ದಿದೆ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ